ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕೋಲ್ಕತ್ತಾ (Kolkatta): ದೇಶವನ್ನೇ ಬೆಚ್ಚಿಬೀಳಿಸಿದ  ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆಯನ್ನು (Life imprisonment) ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಕೋಲ್ಕತ್ತಾದ(Kolkatta) ಆರ್ ಜಿ ಕರ್ ವೈದ್ಯಕೀಯ ಕಾಲೇಜು (Medical College) ಮತ್ತು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿಯ(Medical Student) ಮೃತದೇಹ ಆಸ್ಪತ್ರೆಯ ಸೆಮಿನಾರ್ ರೂಂನಲ್ಲಿ ಪತ್ತೆಯಾಗಿತ್ತು. ಪ್ರಕರಣದಿಂದಾಗಿ ಇಡೀ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ನನ್ನ  ಬಂಧನ ಮಾಡಲಾಗಿತ್ತು.  ಸಿಬಿಐ (CBI) ಸಹ ಪ್ರಕರಣದ ಬಗ್ಗೆ ಆರೋಪ ಪಟ್ಟಿ ಸಲ್ಲಿಸಿತ್ತು. ಪಶ್ಚಿಮ ಬಂಗಾಳದ(West Bengal) ಸೀಲ್ಟಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸಿಬಿಐ ಸಂಜಯ್ ರಾಯ್ ಏಕೈಕ ಆರೋಪಿ ಎಂದು ಉಲ್ಲೇಖ ಮಾಡಿತ್ತು. ಸಾಮೂಹಿಕ ಅತ್ಯಾಚಾರದ ಸಾಧ್ಯತೆಯನ್ನ ನಿರಾಕರಿಸಿತ್ತು.
ಆರೋಪಿ ಸಂಜಯ್ ರಾಯ್ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದು, ನಾನು ಅಮಾಯಕನಾಗಿದ್ದು, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದ. ಆದರೆ ಸೀಲ್ದಾದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಮೂರ್ತಿ ಅನಿರ್ಬನ್ ದಾಸ್ ಪ್ರಕರಣದಲ್ಲಿ ಸಂಜಯ್ ರಾಯ್ ದೋಷಿ ಎಂದು ತೀರ್ಪು ನೀಡಿದ್ದರು.

ಸೋಮವಾರ ಮಧ್ಯಾಹ್ನ  ಸಂಜಯ್ ರಾಯ್ ಹೇಳಿಕೆಯನ್ನು ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸಂತ್ರಸ್ತೆಯ ಕುಟುಂಬಸ್ಥರ ಪರ ವಕೀಲರು, ಗರಿಷ್ಠ ಶಿಕ್ಷೆಯಾಗಿ ಮರಣದಂಡನೆ ವಿಧಿಸಬೇಕೆಂದು  ಕೋರ್ಟ್ ನಲ್ಲಿ ವಾದಿಸಿದ್ದರು.

ಇದನ್ನು ಓದಿ : ಹೊನ್ನಾವರ ಸೇತುವೆ ಮೇಲೆ ಭೀಕರ ಅಪಘಾತ. ಯುವತಿ ದುರ್ಮರಣ

ಮುರ್ಡೇಶ್ವರ ಮಹಾ ರಥೋತ್ಸವ ಸಂಪನ್ನ. ಭಕ್ತಿ-ಭಾವದಿಂದ ತೇರು ಎಳೆದ ಭಕ್ತರು

ಮಣಿ ಮಾರುವ ಹುಡುಗಿ ಕುಂಭಮೇಳದಲ್ಲಿ ಫೇಮಸ್. ಕಾಟ ತಾಳಲಾರದೆ ಸಂಕಷ್ಟ.

ಆಪತ್ಕಾಲದಲ್ಲಿ ನೆರವಿಗೆ ಬಾರದ 108 ಆಂಬುಲೆನ್ಸ್, ವ್ಯಕ್ತಿ ಸಾವು. ಮೃತದೇಹವಿಟ್ಟು ಪ್ರತಿಭಟನೆ.