ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಕಾರವಾರ (Karwar): ಅರಬ್ಬೀ ಸಮುದ್ರದಲ್ಲಿ ಈಜಲು ತೆರಳಿ ಅಪಾಯಕ್ಕೆ ಸಿಲುಕಿದ್ದ ಇಬ್ಬರ ಜೀವ ಉಳಿಸಿದ(Rescue) ಘಟನೆ ಕಾರವಾರದ ರವೀಂದ್ರನಾಥ್ ಟಾಗೋರ್ (Rabindranath Tagore)ಕಡಲ ತೀರದಲ್ಲಿ ಸಂಭವಿಸಿದೆ.
ಸುಧನ್ ನಾಯ್ಕ (35,) ಮತ್ತು ಆಯುಷ್ ರಾತೋಡ್ (10) ರಕ್ಷಣೆಗೊಳಗಾದವರು. ಬುಧವಾರದಂದು ಇವರಿಬ್ಬರು ಈಜಲು ಹೋಗಿ ಅಲೆಗಳ ಸೆಳೆತಕ್ಕೆ ಸಿಲುಕಿ ಆಳದಲ್ಲಿ ಮುಳುಗುತ್ತಿದ್ದರು. ತಕ್ಷಣ ಧಾವಿಸಿದ ಈಜು ಪಟು ಕೋಣೆವಾಡದ ನೂನಾ (ನಿತ್ಯಾನಂದ) ವಿಷ್ಣು ಹರಿಕಂತ್ರ ಹಾಗೂ ಕೋಡಿಭಾಗದ ನಿವೃತ್ತ ಸೈನಿಕ ಅರವಿಂದ ಆರ್. ಕೋಳಿ ಅವರು ಸಾಹಸ ಪಟ್ಟು ಇಬ್ಬರನ್ನು ಲೈಫ್ ಜಾಕೆಟ್ ಸಹಾಯದಿಂದ ದಡಕ್ಕೆ ಕರೆತಂದಿದ್ದಾರೆ. ಅಸ್ವಸ್ಥರಾದ ಇಬ್ಬರನ್ನೂ ಅಂಬ್ಯುಲೆನ್ಸ್ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಇಬ್ಬರು ಚೇತರಿಸಿಕೊಂಡಿದ್ದಾರೆ. ರಕ್ಷಣೆ ಮಾಡಿದ ನೂನಾ ಹಾಗೂ ಅರವಿಂದ್ ಅವರಿಗೆ ರಕ್ಷಣೆಗೊಳಗಾದವರು ಕೃತಜ್ಞತೆ ಸಲ್ಲಿಸಿದ್ದಾರೆ. ಕಾರವಾರ ನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಯುದ್ಧದ ಕಾರ್ಮೊಡ ಐಪಿಎಲ್ ಪಂದ್ಯ ಮುಂದೂಡಿಕೆ
ಐಎನ್ಎಸ್ ವಿಕ್ರಾಂತ ಆರ್ಭಟ. ಕರಾಚಿ ಬಂದರು ಸಂಪೂರ್ಣ ನಾಶ.
ಕಾರವಾರದ ಆರು ಸ್ಥಳಗಳಲ್ಲಿ ಮೇ 12 ರಂದು ಅಣುಕು ಕಾರ್ಯಾಚರಣೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ.