ಕಾರವಾರ : ಕರ್ತವ್ಯಕ್ಕೆ ತೆರಳುತ್ತಿದ್ದ ಇಂಜಿನಿಯರ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಕೊಡ್ಸಳ್ಳಿ ಬಳಿ ನಡೆದಿದೆ.
ಕೆಪಿಸಿ ಬಸ್ ಮತ್ತು ಅಧಿಕಾರಿ ಇರುವ ಬೊಲೆರೋ ನಡುವೆ ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಕೆಪಿಸಿ ಎಂಜಿನಿಯರ್ ಶಿವಪ್ರಸಾದ್ ಏನ್ ಸಾವನ್ನಪ್ಪಿದ ದುರ್ದೈವಿ. ಘಟನೆಯಲ್ಲಿ ಚಾಲಕನ ಕಾಲು ಕಟ್ ಆಗಿದೆ. ಉಳಗಾ ಮೂಲದ ಚಾಲಕ ರಾಮನಾಥ್ ನಾಯ್ಕ ಗಾಯಗೊಂಡ ಚಾಲಕನಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಕದ್ರಾ – ಕೊಡ್ಸಳ್ಳಿ ಡ್ಯಾಮ್ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಎಂಜಿನಿಯರ್ ಬೊಲೆರೋದಲ್ಲಿ ಕೊಡ್ಸಳ್ಳಿ ಡ್ಯಾಮ್ ಕಡೆ ತೆರಳುತ್ತಿದ್ದರು. ಎದುರಿನಿಂದ ಕದ್ರಾ ಕಡೆ ಕೆಪಿಸಿಯ ಬಸ್ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.