ಅಂಕೋಲಾ : ಉಡುಪಿಯ ಗರುಡ ಗ್ಯಾಂಗ್ ನಡುಬೀದಿಯಲ್ಲಿ ಗ್ಯಾಂಗ್ ವಾರ್ ನಡೆಸಿದ ಘಟನೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ಅಂಕೋಲಾದಲ್ಲೊಂದು ಘಟನೆ ಬೆಚ್ಚಿಬೀಳಿಸಿದೆ.
ಆರೇಳು ಯುವಕರ ತಂಡವೊಂದು ಯುವಕನೋರ್ವನನ್ನ ಕಿಡ್ನಾಪ್ ಮಾಡಿ ಮಾರಣಾನಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಂಕೋಲಾದ ಹಟ್ಟಿಕೇರಿಯಲ್ಲಿ ಹಾಡುಹಗಲೆ ಈ ಘಟನೆ ನಡೆದಿದೆ. ಊರ ನಾಗರಿಕರು ಕಂಡೊಡನೆ ಅಸ್ವಸ್ಧ ಯುವಕಕನ್ನು ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದಾರೆ.
ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (27) ಮಾರಣಾನಂತಿಕ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಕಾರವಾರ ಜಿಲ್ಲಾಸ್ಪತ್ರೆಗೆ ಯುವಕನನ್ನ ದಾಖಲಿಸಲಾಗಿದೆ.
ಅಂಕೋಲಾ ಪಟ್ಟಣದ ಪಿ ಎಂ ಪ್ರೌಢ ಶಾಲೆಯ ಎದುರಿನಿಂದ ತಂಡ ಹರ್ಷ ನಾಯ್ಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ತೆರಳಿದೆ. ಮೀನು ಲಾರಿ ಚಾಲಕನಾಗಿರುವ ಹರ್ಷ ನಾಗೇಂದ್ರ ನಾಯ್ಕನನ್ನ ತೆಂಕಣಕೇರಿಯಲ್ಲಿರುವ ತಮ್ಮ ಮನೆಗೆ ಬೈಕ್ನಲ್ಲಿ ಸಾಗುತ್ತಿರುವಾಗ ಕಾರಿನಲ್ಲಿ ಬಂದ ಯುವಕರ ತಂಡ ಕಿಡ್ನಾಪ್ ಮಾಡಿದೆ. ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಬದಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ದೃಶ್ಯವನ್ನ ಸ್ಥಳೀಯರು ನೋಡುತ್ತಿದ್ದಂತೆ ತಂಡ ಓಡಿಹೋಗಿದೆ. ಅಂಕೋಲಾ ಪೊಲೀಸರು ಹಲ್ಲೆಕೋರರಿಗಾಗಿ ಶೋಧ ನಡೆಸಿದೆ.