ಅಂಕೋಲಾ : ತಾಲೂಕಿನ ಕನಕನಹಳ್ಳಿ ಬಳಿ ಬಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಸಂತೋಷ ಪಟಗಾರ ಎಂಬುವವರ ತೋಟದ ಬಳಿ 14 ಅಡಿ ಉದ್ದದ ಈ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು ಸೆರೆ ಹಿಡಿಯಲಾಗಿದೆ.
ಕಳೆದ ಮೂರು ದಿನಗಳಿಂದ ಕನಕನಹಳ್ಳಿ, ಕಲ್ಲೇಶ್ವರ ಸುತ್ತಮುತ್ತಲಿನ ಸ್ಥಳೀಯರ ತೋಟದಲ್ಲಿ ಓಡಾಡುತ್ತಿದ್ದ ಕಾಳಿಂಗ ಸರ್ಪ ಜನರಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದರು.
ಉರಗ ಪ್ರೇಮಿ ಸೂರಜ್ ಶೆಟ್ಟಿ ತಕ್ಷಣ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಬೃಹತ್ ಕಾಳಿಂಗವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೆರೆದ ಜನರಿಗೆ ಕಾಳಿಂಗ ಸರ್ಪದ ಕುರಿತು ಮಾಹಿತಿಯನ್ನು ನೀಡಿದರು. ಉರಗಗಳು ನೀರು ಬೇಕೆಂದಾಗ ಹುಡುಕಿ ಬರುತ್ತವೆ. ಹೀಗಾಗಿ ಅವುಗಳಿಗೆ ತೊಂದರೆ ನೀಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಎಂದರು.