ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೈಂದೂರು(Bynduru) : ಪ್ರಯಾಗರಾಜ್ ನಲ್ಲಿ ನಡೆದ ಕುಂಭಮೇಳ (Kumbhamela) ಯಾತ್ರೆಗೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಅಂತೂ ಇಂತೂ ಶನಿವಾರ ಮನೆಗೆ ವಾಪಾಸ್ಸಾಗಿದ್ದಾರೆ.
ಶಿರೂರು ಗ್ರಾಮದ(Shiruru Village) ಅಳ್ವೆಗದ್ದೆ ನಿವಾಸಿ ಶ್ರೀಧರ ಮೊಗೇರ (50) ಕುಟುಂಬವನ್ನ ಸೇರಿಕೊಂಡವರು. ಫೆಬ್ರವರಿ 22 ರಂದು ಒಟ್ಟು ಮೂವತ್ತು ಜನರು ಶಿರೂರಿನಿಂದ ಕುಂಭಮೇಳ(Shiruru to Kumbhamela) ಯಾತ್ರೆಗೆ ತೆರಳಿದ್ದರು. ಪ್ರಯಾಗರಾಜ್ನಲ್ಲಿ ಜೊತೆಯಲ್ಲಿದ್ದ ಶ್ರೀಧರ ಮೊಗೇರ ಕಾಣೆಯಾಗಿದ್ದರು. ತಂಡದ ಸದಸ್ಯರು ಎರಡು ಮೂರು ದಿನ ಹುಡುಕಿದರೂ ಸಹ ಪತ್ತೆಯಾಗಿಲ್ಲ. ಪ್ರಯಾಗ್ರಾಜ್ ಆರಕ್ಷಕ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು. ಶನಿವಾರ ಮದ್ಯಾಹ್ನ ನಾಪತ್ತೆಯಾದ ವ್ಯಕ್ತಿ ರೈಲಿನ ಮೂಲಕ ಊರಿಗೆ ಬಂದಿದ್ದಾರೆ.
ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿ ಮೊಬೈಲ್ ಚಾರ್ಜ್ ಇಲ್ಲದೇ ಯಾರನ್ನ ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೇಗೋ ರೈಲ್ವೆ ನಿಲ್ದಾಣಕ್ಕೆ ಬಂದು ಬಳಿಕ ರೈಲಿನ ಹಿಂಬದಿ ಬೋಗಿಯಲ್ಲಿ ಕುಳಿತು ಊರಿಗೆ ಪ್ರಯಾಣಿಸಿ ಸುರಕ್ಷಕಿತವಾಗಿ ಮನೆಗೆ ಮರಳಿದ್ದಾರೆ. ಹೀಗಾಗಿ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನು ಓದಿ : ಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಬಿಸಿಲ ಧಗೆ..ಎಚ್ಚರ! ಎಚ್ಚರ !