ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಹಸುವಿನ (Cow)ಮೇಲೆ ಕ್ರೂರತನ ಮಾಡಿದ ದುಷ್ಕರ್ಮಿಗಳ ಮೇಲೆ ಗುಂಡಿನ ಮೊರೆತ ಮಾಡಿ ಎಂದು ಬಿಜೆಪಿ ನಾಯಕ(BJP Leader), ಹಿಂದು ಮುಖಂಡ ನಾಗರಾಜ್ ನಾಯಕ ಗುಡುಗಿದ್ದಾರೆ.
ಕಾರವಾರದಲ್ಲಿ ಹಿಂದು ಸಂಘಟನೆಗಳು(Hindu Sanghatanas) ಆಯೋಜಿಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಮುಂಡಗೋಡು ಕಿಡ್ನಾಪ್ ಕೇಸ್(Mundagodu Kidnap Case) ಸಂಬಂಧಿಸಿ ದರೋಡೆಕೋರರ(Robbarist) ಮೇಲೆ ಪೊಲೀಸರು ಗುಂಡು ಪ್ರದರ್ಶಿಸಿದ್ದರು. ಹೀಗಾಗಿ ಗೋ ಹಂತಕರ ಮೇಲೂ ಅದೇ ರೀತಿ ಕಠಿಣ ನಿಲುವು ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಜಿಹಾದಿ ಸಂಸ್ಕೃತಿಯನ್ನ(Jihadi Culture) ಹೋಗಲಾಡಿಸಲು ನಾವು ಸಿದ್ದರಿದ್ದೇವೆ. ಕೇವಲ ಸ್ಥಳಕ್ಕೆ ಭೇಟಿ ನೀಡಿದರೆ ಗೋವಿಗೆ ರಕ್ಷಣೆ(Catttle Rescue) ನೀಡಲು ಸಾಧ್ಯವಿಲ್ಲ. ಗೋವು ಧಾರ್ಮಿಕವಾಗಿ ಪೂಜನೀಯ ಸ್ಥಾನದಲ್ಲಿದೆ. ಅದನ್ನ ಅಮಾನವೀಯವಾಗಿ ಕತ್ತರಿಸುತ್ತಿದ್ದಿರೆಂದರೆ ಗೋ ಮಾಲೀಕನಿಗೆ ಆಗುವ ಸಂಕಷ್ಟ ಹೇಗಿರಬಹುದು. ಚಾಮರಾಜಪೇಟೆಯಲ್ಲಿ (Chamarajapete) ಆದ ಘಟನೆಗೆ ಅಲ್ಲಿನ ಜನರು ಸುಮ್ಮನಿರಬಹುದು. ಆದರೆ ಉತ್ತರಕನ್ನಡ ಜಿಲ್ಲೆಯ(Uttarakannada District) ಜನ ಸುಮ್ಮನಿರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಧೋರಣೆ ತೆಗೆದುಕೊಳ್ಳಲಿದ್ದೇವೆಂದು ಎಚ್ಚರಿಸಿದ್ದಾರೆ.
ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು(Superintendent of Police) ಆರೋಪಿಗಳನ್ನ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಾಜ್ ನಾಯಕ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸೋಹನ್ ಸಾಳುಂಕೆ, ಸಾಗರ್ ಕುರ್ಡೇಕರ್, ರತನ್ ದುರ್ಗೆಕರ್, ಶರದ್ ಬಾಂದೆಕರ್, ಮನೋಜ್ ಭಟ್, ಸೂರ್ಯ ಕಳಸ್, ಅಮಿತ್ ಮಾಲ್ಸೇಕರ್, ಪ್ರಕಾಶ್ ಶೇಟ್, ಸಾಯಿಕಿರಣ್ ನಾಗೇಕರ್, ಸಚಿನ್ ನಾಯ್ಕ್, ಸಂದೀಪ್ ಕಲ್ಗುಟ್ಕರ್, ಪ್ರಶಾಂತ್ ಪೆಡ್ನೆಕರ್, ಸುಧೀರ್ ನಾಯ್ಕ ಇದ್ದರು.
ಇದನ್ನು ಓದಿ : ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್ ಆಗಿ ಬದಲಾದ ಮೊನಾಲಿಸಾ.
ಮುರ್ಡೇಶ್ವರದಲ್ಲಿ ಆಟೋ ಚಾಲಕರ ಧೀಡಿರ್ ಪ್ರತಿಭಟನೆ.
ರಾಜ್ಯದಲ್ಲಿ ಮದ್ಯ ಮತ್ತೆ ದುಬಾರಿ. ಮದ್ಯ ಪ್ರಿಯರಿಗೆ ಶಾಕ್
ಅಂದು ಕರ್ನಾಟಕದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಸೇವೆ. ಇಂದು ನಾಗಾ ಸಾಧು !
ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ.