ಮುಂಡಗೋಡು(Mundgodu) : ಉದ್ಯಮಿ ಜಮೀರ್ ಕಿಡ್ನಾಪ್ (Kidnap) ಪ್ರಕರಣಕ್ಕೆ ಸಂಬಂಧಿಸಿ ಅಪಹರಣಕಾರರ ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಇಬ್ಬರ ಮೇಲೆ ಪೊಲೀಸರು ಗುಂಡೇಟು(Firing) ಪ್ರಯೋಗಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದ್ದು, ಇಬ್ಬರು ಅಪಹರಣಕಾರರು ಗಾಯಗೊಂಡಿದ್ದಾರೆ. ಡಿಸೆಂಬರ್ 9ರಂದು ರಾತ್ರಿ ಮುಂಡಗೋಡು ಪಟ್ಟಣದಲ್ಲಿ (Mudgodu Town) ಉದ್ಯಮಿ ಜಮೀರ್ ಎಂಬುವವರನ್ನ ಕಾರಿನಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಪೊಲೀಸರು ಕಿಡ್ನಾಪರ್ಸ್(Kidnapers) ಅವರನ್ನ ಬೆನ್ನಟ್ಟಿ ಹೋಗಿದ್ದರು. ಅಪಹರಣಕಾರರು ಉದ್ಯಮಿ ಮೇಲೆ ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ ಮಾಡಿ ಗದಗದ ರಿಂಗ್ ರೋಡ್ ನಲ್ಲಿ (Gadaga Ringroad) ಬಿಟ್ಟು ಪರಾರಿಯಾಗಿದ್ದರು.
ಅಲ್ಲದೇ ಅಪಹರಣಕಾರರನ್ನ ಹಿಡಿಯಲು ಪೊಲೀಸರು ಜಾಲ ಬೀಸಿದ್ದರು. ಐವರು ಆರೋಪಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಧಾರವಾಡ (Dharwad) ಮೂಲದ ಸಾಗರ್ ನಾಗರಾಜ್ ಕಲಾಲ್, ಬಿಜಾಪುರ (Bijapura) ಮೂಲದ ದಾದಾ ಪೀರ್ ಅಲ್ಲಬಕ್ಷ , ಧಾರವಾಡದ ಅಜಯ ಫಕೀರಪ್ಪ ಮಡ್ಲಿ, ಹಸನ್ ಮೈನುದ್ದೀನ್ ಕಿಲ್ಲೆದರ, ರಹೀಂ ಜಾಫರ್ ಸಾಬ್ ರಜ್ಜೇಬಲಿ ಬಂಧಿತರು.
ಆರೋಪಿಗಳನ್ನ ಬಂಧಿಸಿ ಕರೆತರುವಾಗ ಯಲ್ಲಾಪುರ(Yallapur) ತಾಲೂಕಿನ ಹಳಿಯಾಳ(Haliyal) ರಸ್ತೆಯ ಡೋಗಿನಾಳ ಬಳಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಆರೋಪಿಗಳಿಗೆ ಶರಣಾಗಲು ಒಪ್ಪಲಿಲ್ಲ. ಹೀಗಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇಬ್ಬರ ಕಾಲಿಗೆ ಗುಂಡು ಹಾರಿಸಲಾಗಿದೆ. ರಹೀಮ್ ಹಾಗೂ ಅಜಯ ಗುಂಡೇಟು ತಿಂದವರು. ಈವರೀರ್ವರು ಧಾರವಾಡ ಮರ್ಡರ ಕೇಸಿನ ನಟೋರಿಯಸ್ ಆರೋಪಿಗಳೆಂದು ಗೊತ್ತಾಗಿದೆ.
ಘಟನೆಯಲ್ಲಿ ಮುಂಡಗೋಡು(Mundgodu) ಪಿ.ಐ ರಂಗನಾಥ ನೀಲಮ್ಮನವರ್, ಪಿ.ಎಸ್.ಐ ಪರಶುರಾಮ್, ಯಲ್ಲಾಪುರ ಪೊಲೀಸ್ ಶಫಿಶೇಖ್ ಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ. ಗುಂಡು ತಗುಲಿದ ಆರೋಪಿಗಳಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಕ್ರಿಮ್ಸ್ ಗೆ(Karwar Krims) ರವಾನೆ ಮಾಡಲಾಗಿದೆ.
ಇದನ್ನು ಓದಿ : ಶಾಲೆಯಲ್ಲಿ ಮೂರು ವರ್ಷದ ಮತ್ತೋರ್ವ ಬಾಲಕಿ ಹೃದಯಘಾತದಿಂದ ಸಾವು.
ಸಾಧಕ ಶಿಕ್ಷಕನಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಪ್ರಧಾನ