ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ತಾಲೂಕಿನ ಸಾಲ್ಕೋಡು ಗ್ರಾಮದ ಕೊಂಡಾಕುಳಿಯಲ್ಲಿ ಹಸುವಿನ ಹತ್ಯೆ (Cow killed) ಪ್ರಕರಣ ರಾಜ್ಯವನ್ನ ಬೆಚ್ಚಿಬೀಳಿಸಿದೆ. ಸರ್ಕಾರ (Government) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಮಂಗಳವಾರ  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್  ತಮ್ಮ ಕೆಳ ಹಂತದ ಅಧಿಕಾರಿಗಳ ಜೊತೆ ಸಾಲ್ಕೋಡು ಗ್ರಾಮಕ್ಕೆ(ಸಾಲ್ಕೋಡು Village) ಭೇಟಿ ನೀಡಿದರು. ಹಸುವನ್ನ ಕಳೆದುಕೊಂಡ ಕುಟುಂಬದವರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಎಂ ನಾರಾಯಣ್(SP M Narayan), ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವರು ಆರೋಪಿ ಪತ್ತೆಗೆ ಸೂಚಿಸಿದ್ದಾರೆ. ಈಗಾಗಲೇ ಒಟ್ಟು ಆರು ತಂಡಗಳನ್ನ ಮಾಡಿದ್ದೇವೆ. ಮನುಷ್ಯನ ಹತ್ಯೆ ಮಾಡಿದ ಪ್ರಕರಣದ ಹಾಗೆ ಹಸುವಿನ ಹತ್ಯೆ ಕೇಸನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರಕರಣ ಸಂಬಂಧ ಶಂಕಿತ ಐವರನ್ನ ವಶಕ್ಕೆ ತೆಗೆದುಕೊಂಡಿದ್ದೇವೆಂದರು.

ತಪ್ಪಿತಸ್ಥರನ್ನ ಕಾನೂನಿನ ಮುಂದೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ರಸ್ತೆಗಳ ಪ್ರವೇಶ ಮತ್ತು ಹೊರ ಹೋಗುವ ರಸ್ತೆಗಳಿಗೆ ಸಿಸಿಟಿವಿ(CCTV) ಅಳವಡಿಸಲು ಸೂಚಿಸಲಾಗುವುದು. ಈ ಹಿಂದೆ ಗೋ ಕಳ್ಳತನ ಕೃತ್ಯದಲ್ಲಿ ತೊಡಗಿದವರ ಪೂರ್ವಾಪರ ವಿಚಾರಿಸಿ ಗಡಿಪಾರಿಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸುಮಾರು 600 ಗೋವುಗಳನ್ನ ರಕ್ಷಿಸಿದ್ದೇವೆ(Cattle Rescue).  ಗೋ ಕಳ್ಳತನಕ್ಕೆ ಸಂಬಂಧಿಸಿ 400ಕ್ಕೂ ಹೆಚ್ಚು ಜನರನ್ನ ಬಂಧಿಸಿದ್ದೇವೆ. ಹೀಗಾಗಿ  ಕೆಲವೇ ದಿನಗಳಲ್ಲಿ ಆರೋಪಿಗಳ ಬಂಧನ ಮಾಡುವುದಾಗಿ ಎಸ್ಪಿ  ಎಂ ನಾರಾಯಣ್ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾರಿಗಾದರೂ ಮಾಹಿತಿ ಇದ್ರೆ ನನಗೆ ನೇರವಾಗಿ ಸಂಪರ್ಕಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನು ಓದಿ : ಗೋ ಹಂತಕರ ಮೇಲೆ ಪೊಲೀಸರು ಗುಂಡಿನ ಮೊರೆತ ಮೊಳಗಿಸಲಿ : ನಾಗರಾಜ ನಾಯಕ್ ಗುಡುಗು.

ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್ ಆಗಿ ಬದಲಾದ ಮೊನಾಲಿಸಾ.

ರಾಜ್ಯದಲ್ಲಿ ಮದ್ಯ ಮತ್ತೆ ದುಬಾರಿ. ಮದ್ಯ ಪ್ರಿಯರಿಗೆ ಶಾಕ್

ಅಂದು ಕರ್ನಾಟಕದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಸೇವೆ. ಇಂದು ನಾಗಾ ಸಾಧು !

ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ.