ಬೈಂದೂರು:  ತಲ್ಲೂರು  ಉಪ ವಿಭಾಗ ಮಟ್ಟದಲ್ಲಿ  ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಅಧೀಕ್ಷಕ ಇಂಜಿನಿಯರ್ ದಿನೇಶ ಉಪಾಧ್ಯಾಯ ನೇತೃತ್ವದಲ್ಲಿ ತಲ್ಲೂರು ಮೆಸ್ಕಾಂ ಕಚೇರಿಯಲ್ಲಿ  ಜರುಗಿತು.   ಮಳೆಗಾಲದಲ್ಲಿ  ಸಾಕಷ್ಟು ವಿದ್ಯುತ್ ಕಡಿತ ಮಾಡುತ್ತಿರುವ ಬಗ್ಗೆ    ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಸಾರ್ವಜನಿಕರ  ಆಹವಾಲು ಸ್ವೀಕರಿಸಿ ಮಾತನಾಡಿದ ಅಧೀಕ್ಷಕ ಇಂಜಿನಿಯರ್ ದಿನೇಶ ಉಪಾಧ್ಯಾಯ,   ಮುಂದಿನ ದಿನದಲ್ಲಿ ಜನರಿಗೆ ಆಗುವ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಸರಿಪಡಿಸುವ ಬಗ್ಗೆ  ಆಶ್ವಾಸನೆ ನೀಡಿದರು.  ಪ್ರತಿ ಮಂಗಳವಾರ  ದಿನಪೂರ್ತಿ  ವಿದ್ಯುತ್ ಕಡಿತಗೊಳಿಸುವುದರ ವಿರುದ್ಧ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು

ಸಭೆಯಲ್ಲಿ ಹಾಜರಿದ್ದರು ದಲಿತ ಮುಖಂಡರು,   ವಿದ್ಯುತ್ ಇಲಾಖೆಯಿಂದ ಆಗುವ  ಹಲವು ಸಮಸ್ಯೆಗಳ  ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಪ್ರತಿ ದಿನ  ಅನವಶ್ಯಕವಾಗಿ  ಲೋಡ್ ಸೆಟ್ಟಿಂಗ್ ನೆಪದಲ್ಲಿ  ವಿದ್ಯುತ್ ಕಡಿತ ಮಾಡುವುದರ ವಿರುದ್ಧ  ಹಾಗೂ ವಿದ್ಯುತ್ ದುರಸ್ಥಿಗೆ ಬೇಕಾಗುವ ಸಲಕರಣೆಗಳನ್ನು  ಒದಗಿಸುವಂತೆ  ಒತ್ತಾಯಿಸಿದರು.

ಈ ಸಭೆಯಲ್ಲಿ ಗಂಗೊಳ್ಳಿ, ತಲ್ಲೂರು  ಕಟ್ ಬೆಲ್ತೂರು, ಹೆಮ್ಮಾಡಿ,  ಗುಲ್ವಾಡಿ,   ಹಟ್ಟಿ ಅಂಗಡಿ,  ಗುಜ್ಜಾಡಿ,   ಹೊಸಾಡು ತ್ರಾಸಿ,  ವಂಡ್ಸೆ, ಚಿತ್ತೂರು,  ಕೆರಾಡಿ, ಅಂಪಾರು, ಅಜ್ರಿ, ಕರ್ಕುಜೆ, ನಾಡ,  ಆಲೂರು,  ಹಕ್ಲಾಡಿ ಭಾಗದ ಸಾರ್ವಜನಿಕರು  ಹಾಜರಿದ್ದರು. ದಲಿತ ಮುಖಂಡರಾದ ತ್ರಾಸಿ ಭಾಗದ ಸತೀಶ್ ಕಂಚುಗೋಡು, ಚಂದ್ರಶೇಖರ್ ಗುಲ್ವಾಡಿ, ಉದಯ್ ಕುಮಾರ್ ತಲ್ಲೂರು  ಹಾಗೂ ಮೆಸ್ಕಾಂ  ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಹಾಜರಿದ್ದರು.