ಕಾರವಾರ : ಸಾಂಸ್ಕೃತಿಕ ಹಾಗು ವಾಣಿಜ್ಯ ನಗರ  ಶಿರಶಿಯಲ್ಲಿ ಬೆಚ್ಚಿ ಬೀಳುವ ಘಟನೆಗಳು ನಡೆಯುತ್ತಿವೆ. ಈ ಹಿಂದೆ ಜರುಗಿದ ಅಪರಾಧಿ ಚಟುವಟಿಕೆ ಸುಸಂಸ್ಕೃತರು ತಲೆ ತಗ್ಗಿಸುವಂತಾಗಿದೆ. ಸಧ್ಯ ಕಾಲೇಜು ಮಕ್ಕಳ ಹೊಡೆದಾಟ ಬಡಿದಾಟ ಪಾಲಕರಿಗೆ ನೋವು ತರಿಸುತ್ತಿದೆ.

ಹೌದು. ಮನೆಯಲ್ಲಿ ಸುಳ್ಳು ಹೇಳಿ ಕಾಲೇಜಿಗೆ ಬರುವ ಮಕ್ಕಳು  ಅಬ್ಬೆಪಾರಿಯಾಗಿ ಓಡಾಡುತ್ತಿದ್ದಾರೆ. ನಗರದ ಸುಭಾಶ್ಚಂದ್ರ ಬೋಸ್ ಕಾಂಪ್ಲೆಕ್ಸ್  ಹುಡುಗರ ಅಡ್ಡೆಯ ತಾಣವಾಗಿದೆ. ಇಲ್ಲಿಯೇ ಗಾಂಜಾ, ಮದ್ಯ, ,ಜೂಜು ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮಕ್ಕಳ ನಡುವೆ ಹೊಡೆದಾಟ ಬಡಿದಾಟ ನಡೆಯೋದು ಅಲ್ಲೇ ಇರುವ ಸಿಸಿ ಕ್ಯಾಮರದಲ್ಲಿ   ಒಬ್ಬರಿಗೊಬ್ಬರು ಬೈಯ್ದಾಡುತ್ತ ಹೊಡೆದಾಡುವ ದೃಶ್ಯ  ಸೆರೆಯಾಗಿದೆ. ಕೇವಲ ಇದೊಂದೇ ಸ್ಥಳವಲ್ಲ, ನಗರದ ಹಲವು ಕಡೆ ಈ ರೀತಿಯಾದ ಚಟುವಟಿಕೆ ನಡೆಯುತ್ತಿರುವ ಅನುಮಾನ ಇದೆ.

ಕಾಲೇಜಿಗೆ ಕಳಿಸುವ ಮಕ್ಕಳ ಪೋಷಕರಿಗೆ ತಲೆನೋವು ತರಿಸಿದರೆ, ಪೋಲಿಸರು  ಇಂತಹ  ಘಟನೆ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಶಿರಸಿ ಹೆಸರಿಗೆ ಇನ್ನಷ್ಟು ಕಳಂಕ ಬರಲಿದೆ.