ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ಜಿಲ್ಲೆಯಲ್ಲಿ ಬಂದರು ಯೋಜನೆಗಳು(Port Project) ಮಾಡುವ ಮೂಲಕ ಮೀನುಗಾರರ(Fishermans) ಹೊಟ್ಟೆಯನ್ನ ಬರಿದಾಗಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿಲೀಪ್ ಅರ್ಗೇಕರ್ ಕಿಡಿಕಾರಿದ್ದಾರೆ.

ಅಂಕೋಲಾದ ಕೇಣಿ(Ankola keni), ಹೊನ್ನಾವರದ ಕಾಸರಕೋಡ(Honnavar Kasarkodu), ಹಾಗೂ ಕಾರವಾರದಲ್ಲಿ ಬಂದರು(Karwar Port) ಯೋಜನೆ ಮೀನುಗಾರರ ಮೇಲೆ‌ ದಬ್ಬಾಳಿಕೆ ಮಾಡಿಕೊಂಡು ಮಾಡಲು ಹೊರಟಿರುವುದು ನಿಜಕ್ಕೂ ದುರಂತ.

ಸಮುದ್ರದಲ್ಲಿ ಮೀನಿನ ಕೃಷಿ(fish culture) ಮಾಡುವ ಕರಾವಳಿಯ ಮೀನುಗಾರರಿಗೆ ಬೇರೆ ಪ್ರದೇಶದಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವೇ. ಮೀನುಗಾರಿಕೆ ಎನ್ನುವುದು ಮೀನುಗಾರರ ಒಂದೆರಡು ವರ್ಷದ ಉದ್ಯೋಗವಲ್ಲ. ತಲೆಮಾರುಗಳಿಂದ ಮಾಡಿಕೊಂಡು ಬಂದ‌ ಉದ್ಯೋಗವಾಗಿದೆ.

ಮೀನುಗಾರಿಕೆ ಮಾಡುವ ಸ್ಥಳದಲ್ಲೇ ಬಂದರು ಮಾಡಿದರೆ, ಮೀನುಗಾರಿಕೆಯನ್ನು ಮಾಡಲು ಆಗುವುದಿಲ್ಲ. ಭವಿಷ್ಯದಲ್ಲಿ ಮತ್ಸ್ಯ ಸಂತತಿ ಮೇಲೆ ಸಹ ಪರಿಣಾಮ ಬೀಳಲಿದೆ. ಒಂದೊಮ್ಮೆ‌ ಬಂದರು ಯೋಜನೆಯಿಂದ ಮತ್ಸ್ಯ ಸಂತತಿ ಮೇಲೆ‌ ಹೊಡೆತ ಬಿದ್ದರೆ ಇಡೀ ಜಿಲ್ಲೆಯ ಜನರ ತುತ್ತಿನ ಅನ್ನ ಕಸಿದಂತಾಗುತ್ತದೆ.

ಮೀನುಗಾರರು ಅಭಿವೃದ್ಧಿಯ ವಿರೋಧಿಗಳಲ್ಲ. ಹಾಗಂತ ಮೀನುಗಾರರ ಹೊಟ್ಟೆ ಮೇಲೆ ಹೊಡೆದು ಬಂದರು ಮಾಡಲು ಹೊರಟರೆ ಅದನ್ನು ಒಪ್ಪಲು ಹೇಗೆ ಸಾಧ್ಯ.‌ ಬಂದರು ಯೋಜನೆ ವಿರುದ್ದ ಇಡೀ ಜಿಲ್ಲೆಯ ಮೀನುಗಾರರು ಜನರು ವಿರೋಧಕ್ಕೆ ಇಳಿದಿದ್ದಾರೆ.‌ ಈ ಯೋಜನೆ ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕೆ ನಮ್ಮ ವಿರೋಧವಿದೆ.

ಇಡೀ‌ ಜಿಲ್ಲೆಯ ಜನರೊಟ್ಟಿಗೆ ಮುಂದಿನ ದಿನ ನಮ್ಮ ಸಂಘಟನೆಯಿಂದ ಹೋರಾಟ ಮಾಡಲಾಗುವುದು.‌ ನಾಡಿನ ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಮೀನುಗಾರರ ತುತ್ತಿನ ಅನ್ನಕ್ಕೆ ಮಾರಕವಾಗಿರುವ ಬಂದರು ಮಾಡುವ ಯೋಜನೆ ಕೈ ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗೌರಾಧ್ಯಕ್ಷರು ದಿಲೀಪ್ ಅರ್ಗೇಕರ್. ಜಿಲ್ಲಾಧ್ಯಕ್ಷರು ರೋಷನ್ ಹರಿಕಂತ್ರ ಜಿಲ್ಲಾ ಪದಾಧಿಕಾರಿಗಳು ತಾಲೂಕ ಅಧ್ಯಕ್ಷರು ಆಗ್ರಹಿಸಿದ್ದಾರೆ.

ಇದನ್ನು ಓದಿ : ಗಂಟಲಿನೊಳಗೆ ಮೀನು ಸಿಲುಕಿ ಯುವಕ ಸಾವು.

ಭಟ್ಕಳದಲ್ಲಿ ಶಾಲಾ ವಾಹನ ಮತ್ತು ಲಾರಿ ನಡುವೆ ಅಪಘಾತ.

ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಡಿ. ಬಂದರು ಯೋಜನೆ ವಿರುದ್ಧ ಗಣಪತಿ ಉಳ್ವೆಕರ್ ಗುಡುಗು.