ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) :  ಕುಂದಾಪುರ(Kundapura) ತಾಲೂಕಿನ ಗಂಗೊಳ್ಳಿ ಗ್ರಾ ಪಂಚಾಯತ್(Gangolli Grama Panchayat) ಕಚೇರಿಯಲ್ಲಿ  ಮುಸ್ಲಿಂ ಮೌಲ್ವಿ ಯಿಂದ ಪ್ರಾರ್ಥನೆ ನಡೆದರೆ, ಅರ್ಚಕರ ಸಮ್ಮುಖದಲ್ಲಿ ಗಣಹೋಮ ನಡೆಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದರಿಂದ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿ ಕಾಂಗ್ರೆಸ್(Congres) ಮತ್ತು ಎಸ್ಡಿಪಿಐ(SDPI) ಅಧಿಕಾರ ಹಂಚಿಕೊಂಡಿದೆ. ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬುವವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎಸ್ ಡಿ ಪಿ ಐ ಬೆಂಬಲಿತ ಸದಸ್ಯ ತಬ್ರೇಜ್ ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ.

ಪಂಚಾಯತ್ ಉಪಾಧ್ಯಕ್ಷ ತಬರೇಜ್ ಅಧಿಕಾರ ಸ್ವೀಕರಿಸುವ ವೇಳೆ ಮುಸ್ಲಿಂ ಮೌಲ್ವಿಯನ್ನ ಕರೆಸಿ ಪ್ರಾರ್ಥನೆ ಮಾಡಿಸಿದ್ದಾರೆ.
ಕಾಂಗ್ರೆಸ್ ಸದಸ್ಯರು ಗಂಗೊಳ್ಳಿ ಪಂಚಾಯತ್ ನಲ್ಲಿ ಗಣ ಹೋಮ ಮಾಡಿಸಿ ಬೇಡಿಕೊಂಡಿದ್ದಾರೆ. ಗುರುವಾರದಂದು ಉಪಾಧ್ಯಕ್ಷ ತಬ್ರೇಸ್ ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಮಾಡಿದ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು.

ಎರಡು ದಶಕದ ಬಳಿಕ ಗ್ರಾಮ ಪಂಚಾಯತ್ ಅಧಿಕಾರವನ್ನ  ಕಾಂಗ್ರೆಸ್ ಪಡೆದುಕೊಂಡಿದೆ. 12 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಗೆ ಎಸ್‌ಡಿಪಿಐ ನ ಏಳು ಸದಸ್ಯರ ಬೆಂಬಲ ನೀಡಿದ್ದಾರೆ.
ಗಂಗೊಳ್ಳಿ ಪಂಚಾಯತಿನಲ್ಲಿ ಎಸ್ ಡಿ ಪಿ ಐ ನಿಂದ ದುವಾ ವಿಚಾರಕ್ಕೆ ಸಂಬಂಧಿಸಿ ಗಂಗೊಳ್ಳಿ ಹಿಂದು ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಬೈಂದೂರು(Bainduru) ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ : ಕಾನಸ್ಟೇಬಲ್ ಒಬ್ಬರನ್ನ ಹನಿಟ್ರ್ಯಾಪ್ ಖೆಡ್ಡಾಕ್ಕೆ ದೂಡಿದ ಐನಾತಿ ಲೇಡಿ.

ಗೀತಾ ಪ್ರಕರಣ. ಕೊಲೆ ಆರೋಪಿಯ ಬಾಡೂಟ ಉಂಡ ದೋಸ್ತರು.

ಉತ್ತರಕನ್ನಡದ ಸಂಧ್ಯಾ, ಆನಂದ, ಸಂದೀಪ ಸೇರಿ ಹಲವರಿಗೆ ಮಾದ್ಯಮ ಅಕಾಡೆಮಿ ಪ್ರಶಸ್ತಿ.

ಮಗಳ ಮೇಲೆ ಅತ್ಯಾಚಾರ. ರೋಸಿ ಹೋದ ಪತ್ನಿಯಿಂದ ಪತಿ ಫಿನೀಶ್.