ಸಿದ್ದಾಪುರ(Siddapur) : ತಾಲೂಕಿನ ಪಿಗ್ಮಿ ಏಜೆಂಟ್(Pigmy Agent) ಗೀತಾ ಹುಂಡೇಕರ್(72) ಕೊಲೆ (Murder) ಪ್ರಕರಣ ಭೇದಿಸುವಲ್ಲಿ ಸಿದ್ದಾಪುರ ಪೊಲೀಸರು(Siddapura police) ಯಶಸ್ವಿಯಾಗಿದ್ದಾರೆ.
ಪ್ರಕರಣದ ಆರೋಪಿ ಐನಾತಿ ಕಳ್ಳ ಅಭಿಜಿತ್ ಗಣಪತಿ ಮಡಿವಾಳ(28) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 23ರಂದು ಸಿದ್ಧಾಪುರ ಪಟ್ಟಣದ ಸೊರಬ ರಸ್ತೆಯಲ್ಲಿರುವ(Soraba Road) ಬಸವ ಕಾಲೋನಿಯ(Basava Colony) ನಿವಾಸಿ ಗೀತಾ ಹುಂಡೇಕರ್ ಅವರ ಮನೆಗೆ ನುಗ್ಗಿ ಆರೋಪಿ ಕೊಲೆಗೈದಿದ್ದ.
ಎರಡು ದಿನ ಮನೆಯಿಂದ ಹೊರ ಬಾರದ ಗೀತಾ, ಮನೆಯ ಹೊರ ಬಾಗಿಲಿನಲ್ಲಿ ಬಿದ್ದಿದ್ದ ಹಾಲಿನ ಪ್ಯಾಕೇಟ್ ಕಂಡು ಸ್ಥಳೀಯರು ಆಕೆಯ ಅಳಿಯನಿಗೆ ಸುದ್ದಿ ತಿಳಿಸಿದ್ದರು. ನಂತರ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಮನೆಗೆ ಬಂದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಗೀತಾ ಶವವಾಗಿ ಮಲಗಿದ್ದಳು
ಡಿಸೆಂಬರ್ 25ರಂದು ಮನೆಯ ಮುಂದೆ ಊರವರೆಲ್ಲ ಸೇರಿ ಗುಸಗುಸು ಮಾತು. ಕಿರಾತಕ ಅಲ್ಲಿಯೇ ಓಡಾಡಿಕೊಂಡು ಊರವರೊಂದಿಗೆ ದನಿ ಗೂಡಿಸಿದ್ದ. ಆತನೇ ಕೊಂಡ್ಲಿ ಗ್ರಾಮದ ಅಭಿಜಿತ್ ಮಡಿವಾಳ್, ಆರೋಪಿ ಹಣ, ಬಂಗಾರ ದೋಚಿ ಕೊಲೆ ಮಾಡಿದ ಪರಾರಿಯಾಗಿದ್ದ. ನಟೋರಿಯಸ್ ಅಭಿಜಿತ್ ಮಡಿವಾಳ ಬಗ್ಗೆ ಈ ಹಿಂದೆ ತೀರ್ಥಳ್ಳಿ ಶಿಕ್ಷಕರ ಕೋಆಪರೇಟಿವ್ ಬ್ಯಾಂಕ್ ಕಳ್ಳತನದಲ್ಲಿ ಒಂದು ಅಡಿ ಸ್ಕ್ವಾರ್ ಸುತ್ತಳತೆ ಕೊರೆದು ಹೊರ ಬಂದಿದ್ಧ. ಒಂಟಿ ಹೆಣ್ಣು ಗೀತಾಳ ಮನೆಗೂ ಕೂಡ ಹೆಂಚು ಜಾರಿಸಿಯೇ ಇಳಿದಿದ್ದ ಆಸಾಮಿ. ಬಳಿಕ ಆಕೆಯ ಸ್ನಾನದ ಕೋಣೆ ಬಳಿ ಕಳ್ಳತನಕ್ಕಾಗಿ ಹೊಂಚುಹಾಕಿದ್ದ.
ರಾಡ್ ತೋರಿಸಿ ಹೆದರಿಸಿ ಗೀತಾಳನ್ನ ನೆಲಕ್ಕೆ ಕೆಡವಿ ಉಸಿರುಗಟ್ಟಿ ಕೊಲೆ ಮಾಡಿ ಆಕೆಯ ಬಳಿ ಇದ್ದ ಪಿಗ್ಮಿ ಹಣ 20680ರೂ. ಹಣ, ಕಿವಿಯೋಲೆ, ಕೈಯಲ್ಲಿದ್ದ ಬಳೆಗಳನ್ನ ಕಿತ್ತು ಪರಾರಿಯಾಗಿದ್ದ. ಕಿವಿಯೋಲೆಯನ್ನ ಡಿ.26 ರಂದು ಮುತ್ತೂಟ್ ಫೈನಾನ್ಸ್ ನಲ್ಲಿ ಅಡ ಇಟ್ಟು ಹಣ ಪಡೆದಿದ್ದ. ಪೊಲೀಸರ ಕೈಗೆ ಗೆ ಸಿಗುವ ಮೊದಲು ಅಭಿಜಿತ್ ತನ್ನೂರಿನ ಕಾರ್ತಿಕ ಹಬ್ಬದ ದಿನ ಸ್ನೇಹಿತರಿಗೆ ಭರ್ಜರಿ ಬಾಡೂಟ ಹಾಕಿಸಿದ್ದ.
ಇದ್ದಕ್ಕಿದ್ದಂತೆ ಈತನ ಶೋಕಿತನ ಕಂಡ ಊರವರು ಸಂಶಯಗೊಂಡಿದ್ದರು. ಎತ್ತಿಕೊಂಡು ಹೋಗಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಬೆದರಿಕೆ ಹಾಕಿದ್ದಾನಂತೆ.
ಕುಡಿತ, ಮೋಜು-ಮಜಾಕ್ಕಾಗಿ ಕಳ್ಳತನ, ರೌಡಿತನ ಮಾಡುತ್ತಿದ್ದ ಅಭೀಜಿತ್ ಅನಾವಶ್ಯಕವಾಗಿ ಗೀತಾಳನ್ನ ಕೊಲೆ ಮಾಡಿದ್ದಾನೆ. ಪಾಪ, ಹೊಟ್ಟೆ ಪಾಡಿಗಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ಪಿಗ್ಮಿ ಸಂಗ್ರಹಿಸಿ ಬ್ಯಾಂಕಿಗೆ ಹಣ ಕಟ್ಟುತ್ತಿದ್ದ ಗೀತಾಳನ್ನ ಕೊಂದ ಪಾಪಿ ಈಗ ಜೈಲು ಸೇರಿದ್ದಾನೆ. ಇನ್ನೂ ಗೀತಾಳ ಹಣ, ಬಂಗಾರ ಕದ್ದು ಅಭಿಜಿತ್ ನಿಂದ ಬಾಡೂಟ ಉಂಡವರು ದೋಸ್ತಾ…ದೋಸ್ತಾ…. ಅನ್ನುವಂತಾಗಿದೆ.
ಇದನ್ನು ಓದಿ : ಉತ್ತರಕನ್ನಡದ ಸಂಧ್ಯಾ, ಆನಂದ, ಸಂದೀಪ ಸೇರಿ ಹಲವರಿಗೆ ಮಾದ್ಯಮ ಅಕಾಡೆಮಿ ಪ್ರಶಸ್ತಿ.
ಮಗಳ ಮೇಲೆ ಅತ್ಯಾಚಾರ. ರೋಸಿ ಹೋದ ಪತ್ನಿಯಿಂದ ಪತಿ ಫಿನೀಶ್.