ಇ ಸಮಾಚಾರ ಡಿಜಿಟಲ್ಗಾ ನ್ಯೂಸ್ (esamachara digital news) ಬೆಳಗಾವಿ (Belagavi) :  ದೈಹಿಕ ಸಂಪರ್ಕಕ್ಕೆ ಪತ್ನಿ ಒಪ್ಪಿಲ್ಲವೆಂದು ಮಗಳ ಮೇಲೆ ಬಲಾತ್ಕಾರ ಮಾಡಲು ಯತ್ನಿಸಿದ್ದ ಪತಿಯನ್ನ ಪತ್ನಿಯೇ  ಹತ್ಯೆ ಮಾಡಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ(Chikkodi) ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ಮೃತ ಪತಿಯನ್ನು  ಶ್ರೀಮಂತ ಇಟ್ನಾಳೆ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ ಸಾವಿತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಡಿದು ಬಂದು ಪದೇ ಪದೇ ದೌರ್ಜನ್ಯ ಎಸಗುತ್ತಿದ್ದ ಪತಿಯ ಹುಚ್ಚಾಟದಿಂದ ರೋಸಿ ಹೋದ ಪತ್ನಿ  ಸಾವಿತ್ರಿ ಪತಿಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನ ಬಾವಿಗೆ ಎಸೆದಿದ್ದಾಳೆ. ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮೈ ಮೇಲಿನ ಬಟ್ಟೆಯನ್ನೆಲ್ಲ ಸುಟ್ಟು ಹಾಕಿ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾಳೆ. ಬಳಿಕ ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿದ್ದಾಳೆ.

ಪಕ್ಕದ ಜಮೀನಿನಲ್ಲಿ ಮೃತದೇಹ ಕಂಡ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ(Chikkodi) ಮಾಹಿತಿ ನೀಡಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಇದನ್ನು ಓದಿ : ಬಸ್ ದರ ಏರಿಸಿ ಪುರುಷರಿಗೆ ಬರೆ ಎಳೆಯಲು ಮುಂದಾದ ಸರ್ಕಾರ.

ಚಲಿಸುತ್ತಿದ್ದ ಬೈಕ್ ಗೆ ಬೆಂಕಿ. ಸವಾರ ಜಸ್ಟ್ ಮಿಸ್.

ಮುಂಡಳ್ಳಿಯಲ್ಲೊಂದು ಸಂತೆ. ಮಕ್ಕಳ ಕೈಯಲ್ಲಿ ಹಣದ ಕಂತೆ.

ಗ್ರಾಮ ಪಂಚಾಯತ್ ಅಧಿಕಾರಿ ಕಿರುಕುಳಕ್ಕೆ ಸಿಬ್ಬಂದಿಗಳಿಂದ ಕೆಲಸಕ್ಕೆ ಬಹಿಷ್ಕಾರ