ಕಾರವಾರ(Karwar) : ಹೆದ್ದಾರಿಯಲ್ಲಿ ತೆರಳುತ್ತಿದ್ದ ಪ್ರವಾಸಿಗರೊಬ್ಬರ ಬೈಕ್ ಗೆ(Bike) ಆಕಸ್ಮಿಕ ಬೆಂಕಿ(Fire) ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ರಾ. ಹೆದ್ದಾರಿ 66 ಅಮದಳ್ಳಿ ಗ್ರಾಮದ (Amadalli Village) ಬಳಿ ಸಂಭವಿಸಿದೆ.
ಉತ್ತರಪ್ರದೇಶ ಮೂಲದ(Uttarapradesh Native) ಶಾವೇಶ್ ಎಂಬುವವರಿಗೆ ಸೇರಿದ ಜಾವಾ ಬೈಕ್(Java Bike) ಬೆಂಕಿ ಅನಾಹುತಕ್ಕೆ ತುತ್ತಾಗಿದೆ. ಉತ್ತರ ಪ್ರದೇಶದಿಂದ ಗೆಳೆಯರನೇಕರು ಬೈಕ್ ಮೂಲಕ ಪ್ರವಾಸ ಕೈಗೊಂಡಿದ್ದರು. ನಿನ್ನೆ ರಾತ್ರಿ ಮುರ್ಡೇಶ್ವರದಲ್ಲಿ(Murdeshwar) ವಾಸ್ತವ್ಯ ಮಾಡಿ ಇಂದು ಬೆಳಿಗ್ಗೆ ಮುರ್ಡೇಶ್ವರದಿಂದ ಗೋವಾಕ್ಕೆ(Goa) ತೆರಳುತ್ತಿದ್ದರು. ಆಮದಳ್ಳಿ ಬಳಿ ಆಕಸ್ಮಿಕವಾಗಿ ಬೈಕ್ಗೆ ಬೆಂಕಿ ಕಾಣಿಸಿಕೊಂಡಿದೆ. ಇವರ ಹಿಂಬದಿಯಲ್ಲಿ ಬರುತ್ತಿದ್ದ ಇನ್ನೋರ್ವ ಸವಾರ ಬೈಕ್ಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದ್ದಾರೆ. ತಕ್ಷಣ ಸವಾರ ಬೈಕ್ ನಿಲ್ಲಿಸಿ ಓಡಿ ಬಂದಿದ್ದಾರೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಲಿಸುತ್ತಿದ್ದ ಬೈಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಗ್ರಾಮ ಪಂಚಾಯತ್ ಅಧಿಕಾರಿ ಕಿರುಕುಳಕ್ಕೆ ಸಿಬ್ಬಂದಿಗಳಿಂದ ಕೆಲಸಕ್ಕೆ ಬಹಿಷ್ಕಾರ
ಹ್ಯಾಟ್ರಿಕ್ ಹೀರೋ ಶಿವಣ್ಣ ಈಗ ಪಿಟ್.
ಹೊಸ ವರ್ಷಕ್ಕೆ ಅರ್ಧ ದಿನವೇ ಗುರಿ ದಾಟಿ ಈ ಬಾರೀ 308 ಕೋಟಿ ರೂ. ಮದ್ಯ ಮಾರಾಟ.