ಭಟ್ಕಳ(Bhatkal) : ತಾಲೂಕಿನ ಮುಂಡಳ್ಳಿ(Mundalli) ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ 1ರಲ್ಲಿ(Government model higher primary School) ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾದ ಸಂತೆಯನ್ನ ಶಾಲಾಭಿವೃದ್ಧಿ ಸಮಿತಿ(School Development Comitee) ಅಧ್ಯಕ್ಷ ರಾಜೇಶ ನಾಯ್ಕ ಉದ್ಘಾಟಿಸಿದರು. ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂತೆಯಲ್ಲಿ ವಿವಿಧ ವಸ್ತುಗಳನ್ನ ಇಟ್ಟು ವ್ಯಾಪಾರ ಮಾಡಿದರು. ಶಾಲಾ ಆವರಣದಲ್ಲಿ ತರಕಾರಿ(Vegetables), ವಿವಿಧ ರೀತಿಯ ತಿಂಡಿ ತಿನಿಸುಗಳು, ಜ್ಯೂಸ್(Juice), ಆಟಿಕೆ ಸಾಮಾನುಗಳ ವ್ಯಾಪಾರದ ಭರಾಟೆ ಜೋರಾಗಿತ್ತು. ಮುಂಡಳ್ಳಿ ಗ್ರಾಮದ ನಾಗರಿಕರು, ಮಕ್ಕಳ ಪಾಲಕರು ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಖುಷಿ ಪಟ್ಟರು.
ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಸಬೇಕೆಂಬ ಉದ್ದೇಶದಿಂದ ಶಾಲಾ ಆಡಳಿತ ಮಂಡಳಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಸಿತ್ತು. ಶಾಲಾ ಮುಖ್ಯಾಧ್ಯಾಪಕಿ ಪಾರ್ವತಿ ದೊಡ್ಮನೆ ಮತ್ತು ಶಿಕ್ಷಕರ ಸಲಹೆ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಎಸ್ಡಿಎಂಸಿ (SDMC) ಉಪಾಧ್ಯಕ್ಷೆ ಕವಿತಾ ಮೊಗೇರ, ಹಳೆ ವಿದ್ಯಾರ್ಥಿ ಸಂಘದ ಶಶಿಧರ ನಾಯ್ಕ, ಸೇರಿದಂತೆ ಊರ ಹಿರಿಯರು ಉಪಸ್ಥಿತರಿದ್ದರು.
ಇದನ್ನು ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣ ಈಗ ಪಿಟ್.
ಪತಿ ಮೃತರಾದ ಸುದ್ದಿ ಕೇಳಿದ ಪತ್ನಿ ನೇಣಿಗೆ ಶರಣು.
ಗ್ರಾಮ ಪಂಚಾಯತ್ ಅಧಿಕಾರಿ ಕಿರುಕುಳಕ್ಕೆ ಸಿಬ್ಬಂದಿಗಳಿಂದ ಕೆಲಸಕ್ಕೆ ಬಹಿಷ್ಕಾರ
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ನಿಧನ.
Jರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವು.
ಹೊಸ ವರ್ಷಕ್ಕೆ ಅರ್ಧ ದಿನವೇ ಗುರಿ ದಾಟಿ ಈ ಬಾರೀ 308 ಕೋಟಿ ರೂ. ಮದ್ಯ ಮಾರಾಟ.