ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal):  ಮಂಗಳೂರಿನಿಂದ ಅಬುದಾಬಿ ವಿಮಾನದಲ್ಲಿ  ದುಬೈಗೆ(Dubai) ಹೊರಟಿದ್ದ ಭಟ್ಕಳದ ವ್ಯಕ್ತಿಯೋರ್ವ ವಿಮಾನದಲ್ಲಿಯೇ ಹೃದಯಾಘಾತಕ್ಕೆ (Heart Attack) ಒಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇರ್ಷಾದ್ ಇಕ್ಕೇರಿ(67) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಇಲ್ಲಿನ ಹೌಸಿಂಗ್ ಬೋರ್ಡ್ ನಿವಾಸಿಯಾಗಿದ್ದಾನೆ. ಭಟ್ಕಳ ಭೂ ನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಇರ್ಷಾದ್ ತಮ್ಮ ಪತ್ನಿ ಫರಾನಾ ಹಾಗು ಮಗಳೊಂದಿಗೆ ದುಬೈಗೆ  ಹೊರಟಿದ್ದರು. ಮಸ್ಕತ್ ಸಮೀಪ ಬರುತ್ತಿದ್ದಂತೆಯೇ ಇರ್ಷಾದ್  ಹೃದಯಾಘಾತದಿಂದ ಕುಸಿದಿದ್ದು, ವಿಮಾನವನ್ನು ತುರ್ತಾಗಿ ‘ಮಸ್ಕತ್‌ನಲ್ಲಿ ಲ್ಯಾಂಡ್ ಮಾಡಲಾಯಿತು. ಅಷ್ಟರ ಒಳಗೆ ಇರ್ಷಾದ್  ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ ನಾಳೆ  ವಿದ್ಯುತ್ ವ್ಯತ್ಯಯ. ಗ್ರಾಹಕರಿಗೆ ಸೂಚನೆ.

ದಾಂಡೇಲಿಯಲ್ಲಿ ಹೊಸ ಬಸ್ ನಿಲ್ದಾಣ ಮತ್ತು ಬೆಂಗಳೂರ್ ಬಸ್ ಸಂಚಾರಕ್ಕೆ  ಹೋರಾಟ ಸಮಿತಿ ಆಗ್ರಹ.