ಕಾರವಾರ (Karwar): ಕಾರವಾರ ಶಾಸಕ ಸತೀಶ ಸೈಲ್ ತಮ್ಮ ಶಾಸಕ ನಿಧಿಯಿಂದ ಪೊಲೀಸ್ ಇಲಾಖೆಗೆ ಎರಡು ಹೊಸ ವಾಹನಗಳನ್ನ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿರುವ ವಾಹನಗಳು ಹಳೆಯದಾದ ಕಾರಣ ಮತ್ತು ಪೊಲೀಸ್ ಅಧಿಕಾರಿಗಳು ಇನ್ನೂ ಚುರುಕಾಗಿ ಓಡಾಡಲು ಒಟ್ಟು 35ಲಕ್ಷ ರೂ. ವೆಚ್ಚದಲ್ಲಿ ಎರಡು ನೂತನವಾಗಿರುವ ಸ್ಕ್ಯಾರ್ಪಿಯೋ ವಾಹನ ನೀಡಿದ್ದಾರೆ. ಕಾರವಾರ ವಿಭಾಗ ಮತ್ತು ದಾಂಡೇಲಿ ವಿಭಾಗಕ್ಕೆ ವಾಹನ ನೀಡಲಾಗಿದೆ. ಶುಕ್ರವಾರ ನಗರದ ಶ್ರೀ ಮಾರುತಿ ಮಂದಿರದಲ್ಲಿ ಪುರೋಹಿತರು ವಾಹನಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ವಾಹನದ ಕೀ ಯನ್ನ ಡಿವೈ ಎಸ್ಪಿ ಅವರಿಗೆ ಹಸ್ತಾಂತರಿಸಲಾಯಿತು.
ಖುದ್ದು ಶಾಸಕ ಸತೀಶ್ ಸೈಲ್, ಉದ್ಯಮಿ ಎಂ ಆರ್ ಶೆಟ್ಟಿ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಉದ್ಯಮಿ ಮಣಿ, ಕಾರವಾರ ಡಿವೈಎಸ್ಪಿ ಗಿರೀಶ್ ಮತ್ತು ದಾಂಡೇಲಿ ಡಿವೈಎಸ್ಪಿ ಶಿವಾನಂದ ಇನ್ನಿತರರು ಉಪಸ್ಥಿತರಿದ್ದರು.
ಇದನ್ನು ಓದಿ : ನಾಡದೋಣಿ ತಂದು ಪ್ರತಿಭಟಿಸಿದ ಸಾಂಪ್ರದಾಯಿಕ ಮೀನುಗಾರರು.
ಆಶಾ ಕಾರ್ಯಕರ್ತರ ಗೌರವಧನ ಹತ್ತು ಸಾವಿರ ಹೆಚ್ಚಿಸಲು ಸಿಎಂ ಸೂಚನೆ.
ಹೆಗಲಿನಲ್ಲಿ ಬಂದೂಕು. ನಕ್ಸಲ್ ಕರಿನೆರಳಲ್ಲಿ ಅರಳಿದ ಲವ್ ಕಹಾನಿ.
ಉದ್ಯಮಿ ಕಿಡ್ನಾಪ್. ಹಲ್ಲೆ ಮಾಡಿ ಬೇರೊಂದು ಕಡೆ ಬಿಟ್ಟು ಓಡಿದ ಕಿಡ್ನಾಪರ್ಸ್.