ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಬಂದರು ಇಲಾಖೆಯಲ್ಲಿ ಆಡಳಿತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಸುರೇಶ್ ಶೆಟ್ಟಿ ಅವರು ಸೇವಾ ನಿವೃತ್ತಿಯಾಗಿದ್ದಾರೆ.
ಮಂಗಳವಾರದಂದು ಬಂದರು ಇಲಾಖೆಯ ಕಚೇರಿಯಲ್ಲಿ
ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳು, ಅನೇಕ ಸಂಘ ಸಂಸ್ಥೆಯವರು, ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡು ನಿವೃತ್ತಿ ಜೀವನಕ್ಕೆ ಶುಭ ಕೋರಿದರು.
ಕಳೆದ ನಾಲ್ಕು ದಶಕಗಳಿಂದ ಸುರೇಶ್ ಶೆಟ್ಟಿ ಅವರು ಬಂದರು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಶ್ರಮದಿಂದ ಬಂದು ಸರ್ಕಾರಿ ಉದ್ಯೋಗಕ್ಕೆ ಸೇರಿದ ಅವರು ಇಲಾಖೆಯಲ್ಲಿ ಯಾರೊಂದಿಗೂ ಮನಸ್ಥಾಪ ಮಾಡಿಕೊಳ್ಳದೇ ಉತ್ತಮ ಸೇವೆ ಸಲ್ಲಿಸುವ ಮೂಲಕ ಇತರೇ ಸಿಬ್ಬಂದಿಗಳಿಗೆ ಮಾದರಿಯಾದವರು.
ಕೇವಲ ಕೆಲಸದಲ್ಲಿ ಮಾತ್ರವಲ್ಲದೇ ಕಾರವಾರದಲ್ಲಿ ಅನೇಕ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ಸಮಾಜ ಸೇವೆಯನ್ನ ಮಾಡುತ್ತಾ ಬಂದಿದ್ದು ಕಾರವಾರದ ಜನರಿಗೆ ಚಿರಪರಿಚಿತ ಅಧಿಕಾರಿಯಾಗಿದ್ದಾರೆ. ಯಾವುದೇ ಕೆಲಸವನ್ನ ಆಗಲ್ಲ ಎಂದು ಮಾಡುವ ಅಧಿಕಾರಿ ಸುರೇಶ್ ಶೆಟ್ಟಿ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಶೆಟ್ಟಿ ಇಲಾಖೆಗೆ ಸೇರುವಾಗ ಕೇವಲ ಎಸ್ಎಸ್ಎಲ್ಸಿ ಮಾಡಿ ಬಂದಿದ್ದೆ. ಸೇವೆಗೆ ಸೇರಿದ ನಂತರ ಪದವಿ, ಎಲ್ ಎಲ್ ಬಿ ಮಾಡಿದೆ. ಅನೇಕ ಅಧಿಕಾರಿಗಳು ನನಗೆ ಬೆಂಬಲ ನೀಡಿದರು. ಅನೇಕ ಅಧಿಕಾರಿಗಳ ಬೆಂಬಲದಿಂದ ನಾನು ಒಳ್ಳೆಯ ಹೆಸರನ್ನ ಪಡೆದಿದ್ದೇನೆ ಎಂದರು.
ದೇವರು ಕೊಟ್ಟ ದೊಡ್ಡ ಆಸ್ತಿ ನನಗೆ ಹೆಂಡತಿ ಮಕ್ಕಳು. ಪ್ರತಿ ಹಂತದಲ್ಲೂ ಬೆಂಬಲಕ್ಕೆ ನಿಂತಿದ್ದಾರೆ. ಕೆಲಸ ಮಾಡುವಾಗ ಎಂದು ಬೇಸರ ಪಡದೇ ಕೆಲಸವನ್ನ ಖುಷಿ ಪಟ್ಟೇ ಮಾಡಿದ್ದೇವೆ. ಇಲಾಖೆಗೆ ಬರುವ ಮುನ್ನ ಜೀವನದಲ್ಲಿ ಖುಷಿ ಕ್ಷಣ ಕಳೆದಿರಲಿಲ್ಲ. ಬಂದ ನಂತರ ಒಳ್ಳೆಯ ಕ್ಷಣ ಕಳೆದೆವು ಎಂದರು.
ಕಾರವಾರದಲ್ಲಿ ಪಹರೆ, ಡಾ. ರಾಜ್ ಕುಮಾರ್ ಅಭಿಮಾನಿ ಸಂಘ, ಸತ್ಯಸಾಯಿ ಸೇವಾ ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ಬಂದರು ಇಲಾಖೆಯಲ್ಲಿ ಇದ್ದದ್ದಕ್ಕೆ ಸಮಾಜದಲ್ಲಿ ಒಂದಿಷ್ಟು ಕೆಲಸ ಮಾಡಲು ಸಹಕಾರಿಯಾಯಿತು. ಬಂದರು ಇಲಾಖೆಯನ್ನ ಎಂದಿಗೂ ನಾನು ಮರೆಯುವುದಿಲ್ಲ. ಬಂದರು ಇಲಾಖೆ ನನಗೆ ಎಲ್ಲಾ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಬಂದರು ಇಲಾಖೆಯ ಕ್ಯಾಪ್ಟನ್ ಸ್ವಾಮಿ, ತಾರಾನಾಥ್ ರಾಥೋಡ್, ರಾಜಕುಮಾರ್, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನು ಓದಿ : 10 ಸಾವಿರ ರೂ ಚಾಲೆಂಜ್ ಗೆ 5 ಬಾಟಲಿ ಮದ್ಯ ಸೇವಿಸಿದ ವ್ಯಕ್ತಿ ಸಾವು.
ಯುದ್ಧ ಭೀತಿ. ಪಾಕಿಸ್ತಾನದ ಸಾವಿರಾರು ಸಂಖ್ಯೆಯ ಸೈನಿಕರು, ಸೇನಾಧಿಕಾರಿಗಳ ರಾಜೀನಾಮೆ.