ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಉಡುಪಿ(Udupi) : ಮೀನುಗಾರಿಕೆ ವಿಚಾರದಲ್ಲಿ ಕರಾವಳಿಯಲ್ಲಿ ಮೀನುಗಾರರ(Karavali Fishermans) ನಡುವೆ ಸಂಘರ್ಷ(Clash) ತಾರಕಕ್ಕೇರಿದೆ. ಅವೈಜ್ಞಾನಿಕ ಮೀನುಗಾರಿಕೆ (Unscientific Fishing) ವಿರುದ್ಧ ಸಾಂಪ್ರದಾಯಿಕ(Traditional) ಮೀನುಗಾರರು ಮರವಂತೆ ಕಡಲತೀರದಲ್ಲಿ(Maravante Beach) ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ  ಅವೈಜ್ಞಾನಿಕ  ಬುಲ್ ಟ್ರಾಲ್(Bulltrall) ಹಾಗೂ ಲೈಟ್ ಫಿಶಿಂಗ್(Light fishing) ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಮೀನುಗಳ ಸಂತತಿಗೆ ಮಾರಕವಾಗುವ ಈ ತರಹದ ಮೀನುಗಾರಿಕೆ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.  ಉಡುಪಿ(Udupi), ಉತ್ತರಕನ್ನಡ(Uttarkannada), ಮಂಗಳೂರಿನಿಂದ (Mangalore) ಮೀನುಗಾರರು ತಮ್ಮ ನಾಡದೋಣಿಯ ಮೂಲಕ ಆಗಮಿಸಿ ಗಮನ ಸೆಳೆದಿದ್ದಾರೆ.

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ನಾಡದೋಣಿಗಳನ್ನು ಸಮುದ್ರದಲ್ಲಿ ಲಂಗರು ಹಾಕಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು  ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವೈಜ್ಞಾನಿಕ ಮೀನುಗಾರಿಕೆಯನ್ನು ತಡೆಯ ಬೇಕೆಂದು ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದನ್ನು ಓದಿ : ಆಶಾ ಕಾರ್ಯಕರ್ತರ ಗೌರವಧನ ಹತ್ತು ಸಾವಿರ ಹೆಚ್ಚಿಸಲು ಸಿಎಂ ಸೂಚನೆ.

ಹೆಗಲಿನಲ್ಲಿ ಬಂದೂಕು. ನಕ್ಸಲ್ ಕರಿನೆರಳಲ್ಲಿ ಅರಳಿದ ಲವ್ ಕಹಾನಿ.

ಉದ್ಯಮಿ ಕಿಡ್ನಾಪ್. ಹಲ್ಲೆ ಮಾಡಿ ಬೇರೊಂದು ಕಡೆ ಬಿಟ್ಟು ಓಡಿದ ಕಿಡ್ನಾಪರ್ಸ್

ಹಿಂದುಸ್ತಾನವು ಎಂದು ಮರೆಯದ ಬಹುಭಾಷೆಯ ಖ್ಯಾತ ಗಾಯಕ ನಿಧನ.

ನಿಯಮ ಮೀರಿದ ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ ದಂಡ.