ಮುಂಡಗೋಡ (Mundgodu): ಪಟ್ಟಣ ಮಾದರಿ ಶಾಲೆಯ ಎದುರು ಬೈಕ್ ಗೆ ಡಿಕ್ಕಿ ಹೊಡೆಸಿ ಕೆಳಕ್ಕೆ ಬೀಳಿಸಿ  ಉದ್ಯಮಿಯೋರ್ವನನ್ನ(Businessmen) ಅಪಹರಿಸಲಾಗಿದೆ(Kidnap). ತಡರಾತ್ರಿ ಗದಗದ ರಿಂಗ್ ರೋಡ್ ನಲ್ಲಿ(Gadag Ringroad) ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಮುಂಡಗೋಡಿನ(Mundgod) ಜಮೀರ ಅಹ್ಮದ್ ದರ್ಗಾವಾಲೆ ಎಂಬಾತನೇ ಅಪಹರಣಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ. ರಾತ್ರಿ ಜಮೀರ್ ತಾಲೂಕು ಕ್ರೀಡಾಂಗಣದಿಂದ  ಮಾದರಿ ಶಾಲೆಯ ಮುಂಭಾಗದ ಮಾರ್ಗವಾಗಿ ತಮ್ಮ ಬೈಕ್ ನಲ್ಲಿ  ಮತ್ತೋರ್ವನೊಂದಿಗೆ ಮನೆಗೆ ತೆರಳುತ್ತಿದ್ದರು.  ಬಿಳಿ ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಸಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದವನಿಗೆ ಬೆದರಿಸಿದ್ದಾರೆ. ಬಳಿಕ  ಜಮೀರ್ ಅಹ್ಮದ್ ಮೇಲೆ ಹಲ್ಲೆ ನಡೆಸಿ ಕಾರ್ ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು.

ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ವಿಷಯ ತಿಳಿದ ತಕ್ಷಣವೇ ಮುಂಡಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ  ವಿವಿಧಡೆ ಇದ್ದ ಸಿಸಿ ಕ್ಯಾಮೆರಾ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಕಾರಿನ ಜಾಡು ಹಿಡಿದು ಹೊರಟಿದ್ದರು.

ಇಂದು  ತಾಲೂಕಾ ಕ್ರೀಡಾಂಗಣದಲ್ಲಿ ಎಮ್ ಸಿ ಎಲ್ ಲೀಗ್ ಕ್ರಿಕೆಟ್(Cricket) ಪಂದ್ಯಾವಳಿ ನಡೆಯಲಿದೆ. ಜಮೀರ ಅಹ್ಮದ ಮಾಲೀಕತ್ವದ ತಂಡ ಸಹ ಇದೆ. ಇದಕ್ಕಾಗಿ  ಗುರುವಾರ ಸಂಜೆ ತಾಲೂಕಾ ಕ್ರೀಡಾಂಗಣದಲ್ಲಿ ತಮ್ಮ ತಂಡದವರ ಜತೆ ಪೋಟೊ ಕ್ಲಿಕಿಸಿಕೊಂಡು  ಪಂದ್ಯಾವಳಿಗೆ ತಯಾರಿ ನಡೆಸಿದ್ದರು. ಆದರೆ ಜಮೀರ ಅಹ್ಮದ್ ದರ್ಗಾವಾಲೆ ಅಪಹರಣ ಮಾಡಬೇಕೆಂಬ ಉದ್ದೇಶದಿಂದಲ್ಲೇ ಕ್ರೀಡಾಂಗಣ ಹತ್ತಿರದ ಕಾದು ಕುಳಿತ್ತಿದ್ದ ನಾಲ್ವರ ತಂಡ ಸ್ಕೂಟಿಯ ಮೇಲೆ ತನ್ನ ಸೇಹಿತನ ಜತೆ  ಮನೆ  ಕಡೆ ಬರುತ್ತಿದ್ದ ವೇಳೆ ಅಪಹರಣ ಮಾಡಿ ಬಂಕಾಪುರ ಮಾರ್ಗವಾಗಿ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ  ಚಾಕುವಿನ ಹಿಡಿಕಿಯೊಂದು ಪತ್ತೆಯಾಗಿದೆ. ದುಷ್ಕರ್ಮಿಗಳು ಜಮೀರ್ ನ ಮುಖಕ್ಕೆ ಬಟ್ಟೆ ಹಾಕಿ ಹಲ್ಲೆ ನಡೆಸಿ ಗದಗದ ರಿಂಗ್ ರೋಡ್ ನಲ್ಲಿ  ಬಿಟ್ಟು ಪರಾರಿಯಾಗಿದ್ದಾರೆ.  ಹುಬ್ಬಳ್ಳಿಯ(Hubli) ಖಾಸಗಿ ಆಸ್ಪತ್ರೆಯಲ್ಲಿ ಜಮೀರ್ ಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಶಿರಸಿ ಡಿವೈಎಸ್ಪಿ(Sirsi DYSP) ಕೆ ಎಲ್ ಗಣೇಶ ಭೇಟಿ ನೀಡಿದ್ದು, ತನಿಖೆ ನಡೆಸಲಾಗಿದೆ.

ಇದನ್ನು ಓದಿ : ಹಿಂದುಸ್ತಾನವು ಎಂದು ಮರೆಯದ ಬಹುಭಾಷೆಯ ಖ್ಯಾತ ಗಾಯಕ ನಿಧನ.

ನಿಯಮ ಮೀರಿದ ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ ದಂಡ.

ಶಿರಸಿಯಲ್ಲಿ ಅರಣ್ಯ ಅಧಿಕಾರಿಗಳ ದಾಳಿ. 92 ನಾಟ ಮತ್ತು ಲಾರಿ ಸೇರಿ ಇಬ್ಬರು ವಶಕ್ಕೆ

ಅರಬ್ಬೀ ಸಮುದ್ರದಲ್ಲಿ ಪಲ್ಟಿಯಾದ ದೋಣಿ. ಆಪತ್ಬಾಂಧವನಂತೆ ಬಂದ ಮಂಗಳೂರು ಮೀನುಗಾರರು

ಭಟ್ಕಳದಲ್ಲಿ ಗಾಂಜಾ ಹೊಡೆದ ಯುವಕನ ಆರೆಸ್ಟ್.