ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(karwar): ಕಾಶ್ಮೀರದ ಪಹಲ್ಲಾಮ್ನಲ್ಲಿ(Kashmir Phehalgam) ನಡೆದ ಭಯೋತ್ಪಾದಕ ದಾಳಿಯ ನಂತರ ಗಾಯಕಿ ಶ್ರೇಯಾ ಘೋಷಾಲ್(Shreya Ghoshal) ತಮ್ಮ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದ ಬಗ್ಗೆ ವರದಿಯಾಗಿದೆ.
ಶ್ರೇಯಾ ಘೋಷಾಲ್, ತಮ್ಮ “ಆಲ್ ಹಾರ್ಟ್ಸ್ ಟೂರ್”ನ ಭಾಗವಾಗಿ ಏಪ್ರಿಲ್ 26ರಂದು ಸೂರತ್ನಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನೀಡಬೇಕಾಗಿತ್ತು. ಆದರೆ ಪಹಲ್ಲಾಮ್ ದಾಳಿ(Pehalgam Attack) ಹಿನ್ನೆಲೆ ಕಾರ್ಯಕ್ರಮ ನಡೆದಿಲ್ಲ. ಜನಪ್ರಿಯ ಗಾಯಕ ಅರಿಜಿತ್ ಸಿಂಗ್ (Arijeet Singh) ಅವರ ಭಾನುವಾರ ನಿಗದಿಯಾಗಿದ್ದ ಚೆನ್ನೈ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು. ರ್ಯಾಪರ್ ಎಪಿ ಧಿಲ್ಲೋನ್ ಅವರು ಸಹ ತಮ್ಮ ಮುಂಬರುವ ಮ್ಯೂಸಿಕ್ ಆಲ್ಬಮ್(Music Album) ಬಿಡುಗಡೆಯನ್ನು ಮುಂದೂಡಿದ್ದಾರೆ.
ಗಾಯಕ ಪಾಪನ್ ಸಹ ಶನಿವಾರದಂದು ನಿಗದಿಯಾಗಿದ್ದ ಅಹಮದಾಬಾದ್ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು. ಸಂಗೀತ ಸಂಯೋಜಕ ಮತ್ತು ಗಾಯಕ ಅನಿರುದ್ಧ ರವಿಚಂದರ್ ತಮ್ಮ ಮುಂಬರುವ ಬೆಂಗಳೂರು ಸಂಗೀತ ಕಾರ್ಯಕ್ರಮದ ಟಿಕೆಟ್ ಮಾರಾಟವನ್ನು ಮುಂದೂಡಿದ್ದಾರೆ.
ಈ ನಡುವೆ ಕಾರವಾರದಲ್ಲಿ ಮುಂದಿನ ವಾರ ಕರಾವಳಿ ಉತ್ಸವ ಆಯೋಜಿಸಲಾಗಿದೆ. ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಬಹು ಭಾಷಾ ಗಾಯಕ ಸೋನು ನಿಗಮ್(Sonu Nigam), ಶಂಕರ್ ಮಹಾದೇವನ್(Shankar Mahadevan), ಮಿಖಾ ಸಿಂಗ್(ಮಿಖಾ Singh) ಅವರಿಗೆ ಆಹ್ವಾನಿಸಲಾಗಿದೆ. ಆದರೆ ಕಾಶ್ಮೀರ ಘಟನೆ ಹಿನ್ನಲೆಯಲ್ಲಿ ಅವರೆಲ್ಲರೂ ಕಾರ್ಯಕ್ರಮ ನಡೆಸಿಕೊಡ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನು ಓದಿ: ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣದ ಆರೋಪಿ ಬಂಧನ
ಪ್ರಧಾನಿ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಮಾನಕಾರಿ ಪೋಸ್ಟ್ ಶೇರ್ ಮಾಡಿದಾತ ಕಂಬಿ ಹಿಂದೆ.