ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ (Dandeli): ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಸೇರಿದಂತೆ ರಾಷ್ಟ್ರ ನಾಯಕರನ್ನು ಅವಮಾನಿಸಲಾದ ಭಾವಚಿತ್ರವನ್ನು ಶೇರ್ ಮಾಡಿದ್ದ ವ್ಯಕ್ತಿಯನ್ನು ದಾಂಡೇಲಿ ಪೊಲೀಸರು ಕಂಬಿ ಹಿಂದೆ ಕಳಿಸಿದ ಘಟನೆ ನಡೆದಿದೆ.

ದಾಂಡೇಲಿ ಮಾರ್ಕೆಟ್(Dandeli Market) ಹತ್ತಿರ ಹಣ್ಣು ಹಂಪಲು ವ್ಯಾಪಾರ ಮಾಡುವ ಅನಿಸ್ ಹುಲ್ಗರ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.

ಶ್ವಾನದ ದೇಹದ ಭಾವಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi), ಉತ್ತರ ಪ್ರದೇಶದ(Uttarapradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath), ಕೇಂದ್ರ ಗೃಹ ಸಚಿವ(Home Minister) ಅಮಿತ್ ಶಾ(Amit Sha) ಅವರ ಭಾವಚಿತ್ರವನ್ನು ಹಾಕಲಾದ ಫೋಟೋವನ್ನು ಫೇಸ್ಬುಕ್’ನಲ್ಲಿ ಶೇರ್ ಮಾಡಿದ್ದ.

ಅನಿಸ್ ಹುಲ್ಗರ್  ಅಪಮಾನಕರವಾದ ಫೋಟೋವನ್ನು ಫೇಸ್ ಬುಕ್ ಮೂಲಕ ಶೇರ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು  ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಇದನ್ನು ಓದಿ : ಕಾರವಾರದ ಚಿರಪರಿಚಿತ ಗಣಪತಿ ಹೊಳೆಗದ್ದೆ ಹಠಾತ್ ನಿಧನ

ಉತ್ತರಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಪಾಕಿಸ್ತಾನಿಗಳು ಲಾಂಗ್ ಟರ್ಮ್ ವೀಸಾದಲ್ಲಿದ್ದವರು: ಎಸ್ಪಿ ಎಂ ನಾರಾಯಣ್.