ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ(Sirsi): ನಗರದ ಟಿಪ್ಪು ನಗರ ನಿವಾಸಿ ಮತ್ತು ಪಿ.ಎಫ್.ಐ. ಕಾರ್ಯಕರ್ತ ಮೌಸೀನ್ ಅಲಿಯಾಸ್ ಇಮ್ಮಿಯಾಝ್ ಶುಕುರ್ ಎಂಬಾತನನ್ನ ಬಂಧಿಸಿದ್ದಾರೆ.

ವಿಜಯಪುರ(:Vijayapur) ಜಿಲ್ಲೆಯ ಸಿಂದಗಿಯಲ್ಲಿ ಪೊಲೀಸರು ಬಂಧಿಸುವಲ್ಲಿ. ಉತ್ತರಕನ್ನಡ ಎಸ್ಪಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಮೌಸೀನ್ ಇದಕ್ಕೂ ಮುಂಚೆ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಎನ್‌ಐಎಯಿಂದ ಬಂಧಿತನಾಗಿದ್ದ.  ಸಾದಿಕ್‌ನನ್ನು ತಯಾರು ಮಾಡಿದವನು ಇವನೇ ಎಂದು ಹೇಳಲಾಗಿತ್ತು. ಅಲ್ಲದೆ, ಶಿರಸಿಯಲ್ಲಿ(Sirsi) ನಡೆದ ಐಪಿಸಿ 302(ಕೊಲೆ) ಪ್ರಕರಣದಲ್ಲೂ ಈತ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಜಿ ಹಳ್ಳಿ-ಡಿಜೆ ಹಳ್ಳಿ (KG Halli-DJ Halli) ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಪಟ್ಟಿಯಲ್ಲಿದ್ದ ಮೌಸೀನ್ ದೀರ್ಘಕಾಲದಿಂದ ಪರಾರಿಯಾಗಿದ್ದ. ಆರೋಪಿ ಸಿಂದಗಿಯಲ್ಲಿ ನೆಲೆಸಿದ್ದ ಬಗ್ಗೆ ಪೊಲೀಸರು ಪತ್ತೆಹಚ್ಚಿ, ವಿಶೇಷ ದಾಳಿ ನಡೆಸಿ ಆರೆಸ್ಟ್ ಮಾಡಲಾಗಿದೆ.  ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.