ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ಒಂಬತ್ತನೇ ರಾಷ್ಟ್ರೀಯ ಯುನಾನಿ ದಿನಾಚರಣೆಯ ಅಂಗವಾಗಿ ಕಾರವಾರದ ಲಾಯನ್ಸ ಕ್ಲಬ್(Lions Club) ಇವರು ಜಿಲ್ಲಾ ಆಯುಷ್ ಇಲಾಖೆಯ(District Ayush Department) ಸಹಕಾರದೊಂದಿಗೆ ಹಾಗೂ ಕಾರವಾರ ರೋಟರಿ ಸೀಸೈಡ್(Rotary Seaside) ಇವರೊಂದಿಗೆ ಜಂಟಿಯಾಗಿ ನಗರ ಸಭೆಯ ಆವರಣದಲ್ಲಿ ಕಾರವಾರದ ನಾಗರೀಕರಿಗಾಗಿ ಯುನಾನಿ ಆರೋಗ್ಯ ತಪಾಸಣೆ (Unani Health Camp) ಹಾಗೂ ಉಚಿತ ಔಷದಿ ವಿತರಣೆ ಶಿಬಿರ ಭಾನುವಾರ ನಡೆಯಿತು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಶಿಬಿರ ಉಧ್ಘಾಟಿಸಿ ಮಾತನಾಡಿದರು. ಲಾಯನ್(Lion) , ರೋಟರಿ(Rotary) ಹಾಗೂ ಆಯುಷ್ ಇಲಾಖೆವರು ಕಾರವಾರದ ನಾಗರೀಕರ ಆರೋಗ್ಯಕ್ಕಾಗಿ ಹೊಂದಿರುವ ಕಾಳಜಿಯನ್ನು ಶ್ಲಾಘಿಸಿ ಈ ಸಂಘಟನೆಗಳು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಸಾರ್ವಜನಿಕ ಸೇವಾ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಸಹಕರಿಸುವ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ ಅವರು ಯುನಾನಿ ಚಿಕಿತ್ಸಾ ಪದ್ದತಿಯ ಕುರಿತು ಮಾಹಿತಿ ನೀಡಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆಗೊಳಪಡುವ ಮೂಲಕ ಶಿಭಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾರವಾರ ಲಾಯನ್ಸ ಕ್ಲಬ್ ಅಧ್ಯಕ್ಷ ಲಾ. ದೇವಾನಂದ ಮಂತ್ರಿ ಹಾಗೂ ರೋಟೇರಿಯನ್ ಕೃಷ್ಣಾನಂದ ಕೋಲ್ವೇಕರ ಇವರು ಶಿಬಿರದ ಪ್ರಾಮುಖ್ಯತೆ ಮತ್ತು ಆಯೋಜನೆಯ ಹಿಂದಿರುವ ಶ್ರಮ ಹಾಗೂ ಸದುದ್ದೇಶಗಳ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು.
ಲಾಯನ್ ಡಾ. ಎಸ್.ವಿ.ನಾಯಕ ಕಾರ್ಯಕ್ರಮ ನಿರ್ವಹಿಸಿದರೆ, ಯುನಾನಿ ವೈದ್ಯ ಡಾ.ಮಲ್ಲಿಕಾರ್ಜುನ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಲಾಯನ್ ಗಳಾದ ಕೆ.ಎಸ್. ಕಿನ್ನರಕರ, ಶಶಿ ಮಾಸೂರಕರ ,ಗಜಾನನ ಆಳ್ವಾ, ಎಲ್ ಎಮ್ ಪ್ರಭು, ವಿನೋದ ನಾಯ್ಕ ,Zonal Chairperson ವಿನಯಾ ನಾಯ್ಕ , ಸೆಕ್ರೇಟರಿ ದಿಲೀಪ್ ರೇವಣಕರ , ಅಲ್ತಾಪ್ ಶೇಖ್, ಇಬ್ರಾಹಿಮ್ ಕಲ್ಲೂರ ಹಾಗೂ ರೋಟರಿ ಕ್ಲಬ್ ಸೀಸೈಡ್ ಕಾರವಾರ ಸದಸ್ಯರಾದ ರೊಟೇರಿಯನ್ ಜಯಪ್ರಕಾಶ್, ಬಾಲಕೃಷ್ಣ ಪೈ , ದೀಪಾ ಪೈ, ಪ್ರಸನ್ನ ರೇವಣಕರ, ಶಿವಾನಿ ರೇವಣಕರ,ಕಿರಣ್ ಮೋಹನ್, ಸಂಧ್ಯಾ ಕಿರಣ್, ಗಣಪತಿ ಬಾಂದೇಕರ, ಸುಷ್ಮಾ ಬಾಂದೇಕರ, ಮುಂತಾದ ಗಣ್ಯರು ಹಾಜರಿದ್ದರು. ಶಿಬಿರದಲ್ಲಿ 88 ನಾಗರೀಕರ ಆರೋಗ್ಯವನ್ನು ಡಾ. ಮಲ್ಲಿಕಾರ್ಜುನ ಹಿರೇಮಠ ಇವರು ತಪಾಸಿಸಿ ಸಲಹೆ ನೀಡಿದರು. ಆಯುಷ್ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ಉಷಾ ಮಂಕಿಕರ, ಸಂಗೀತಾ ನಾಯ್ಕ, ದಿನೇಶ ನಾಯ್ಕ ಸಹಕರಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ 24 ಹೈಸ್ಕೂಲು ವಿದ್ಯಾರ್ಥಿಗಳಿಗೆ ಆರೋಗ್ಯವೇ ನಿಜವಾದ ಸಂಪತ್ತು ಎಂಬ ಜಾಗೃತಿ ಮೂಡಿಸಿ ಆಯುಷ್ ಇಲಾಖೆಯಲ್ಲಿ ವೈದ್ಯರಾಗುವ ವಿಧಾನ ಹಾಗೂ ಭವಿಷ್ಯದಲ್ಲಿ ಇರುವ ಅವಕಾಶಗಳ ಕುರಿತು ಅಧಿಕಾರಿ ಡಾ.ಲಲಿತಾ ಶೆಟ್ಟಿಯವರು ಮಾಹಿತಿ ನೀಡಿ ಆಯುಷ್ ವೈದ್ಯರಾಗಲು ಪ್ರೋತ್ಸಾಹಿಸಿದರು. ಕಾರವಾರದ ಲಾಯನ್ಸ ,ರೋಟರಿ ಸೀಸೈಡ್, ಸಂಘಟನೆಗಳು ,ಆಯುಷ್ ಇಲಾಖೆ ಹಾಗೂ ನಗರಸಭೆಗಳ ಜಂಟಿ ಶಿಬಿರದ ಲಾಭವನ್ನು 112 ನಾಗರಿಕರು ಪಡೆದುಕೊಂಡರು.
ಇದನ್ನು ಓದಿ: ತೂಕ ಇಳಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ.
ಕುಂಭ ಮೇಳದಲ್ಲಿ 30 ಕೋಟಿ ಗಳಿಸಿದ ನಾವಿಕ ಕುಟುಂಬಕ್ಕೆ ಟ್ಯಾಕ್ಸ್ ಸಂಕಷ್ಟ.
ಚಾಂಪಿಯನ್ಸ್ ಟ್ರೋಫಿ ಭಾರತದ ಮುಡಿಗೆ. ಭಟ್ಕಳದಲ್ಲಿ ವಿಜಯೋತ್ಸವ ವೇಳೆ ಅಭಿಮಾನಿಗಳನ್ನ ನಿಯಂತ್ರಿಸಲು ಹರಸಾಹಸ