ಭಟ್ಕಳ(BHATKAL) : ತಾಲೂಕಿನ ತಲಗೋಡು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿ ಮೂರ್ತಿಯನ್ನು  ಸಮುದ್ರದಲ್ಲಿ ವಿಸರ್ಜನೆ ಮಾಡುವ ವೇಳೆ ಅಲೆಗೆ ಕೊಚ್ಚಿಹೋದ ಬಾಲಕನನ್ನು ಕರಾವಳಿ ಕಾವಲು ಪಡೆಯ ಕೆ.ಎನ್.ಡಿ(KND) ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ .

   ಸಮರ್ಥ ಶ್ರೀಧರ ಖಾರ್ವಿ(14) ರಕ್ಷಣೆಯಾದ ಬಾಲಕನಾಗಿದ್ದಾನೆ. ಈತ ಬಂದರಿನ ನಿವಾಸಿ. Indu ಸಂಜೆ ಮೂರ್ತಿ ವಿಸರ್ಜನೆ ವೇಳೆ ತಲಗೋಡು ಸಮುದ್ರದಲ್ಲಿ ಅಲೆಗೆ ಕೊಚ್ಚಿ  ಹೋಗುತ್ತಿದ್ದ. ಇದೇ ವೇಳೆ ಕರ್ತವ್ಯದಲ್ಲಿದ್ದ  ಕರಾವಳಿ ಕಾವಲು ಪಡೆಯ ಸಿಪಿಐ(CPI) ಕುಸುಮಧರ ಕೆ ಮಾರ್ಗದರ್ಶನದಲ್ಲಿ ಕೆ.ಎನ್ ಡಿ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ ಖಾರ್ವಿ ತಮ್ಮ ಜೀವದ ಹಂಗು ತೊರೆದು ಸಮುದ್ರಕ್ಕೆ ಧುಮುಕಿ ಈಜಿ ಜೀವ ಕಾಪಾಡಿದ್ದಾರೆ.

ಕರಾವಳಿ ಕಾವಲು ಪಡೆಯ(COASTAL SERVICE POLICE)  ಕೆಎನ್ಡಿ ಪೊಲೀಸರ  ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಅಸ್ವಸ್ತಗೊಂಡ ಬಾಲಕನನ್ನು  ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಇದನ್ನು ಓದಿ : ಜಮೀನು ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ