ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bengaluru) : ಕಾರವಾರ(Karwar) ನಗರದ ಸೆಂಟ್ ಮೈಕಲ್ ಶಾಲೆ ಎದುರಿನ ವೃತ್ತಕ್ಕೆ `ನಿಜಶರಣ ಅಂಬಿಗರ ಚೌಡಯ್ಯ ವೃತ್ತ’ (Ambigara Choudayya vrutta) ಎಂದು ಹೆಸರಿಡಲು ಬಗ್ಗೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ (MLC Ganapati Ulvekar) ಪ್ರಯತ್ನಿಸುತ್ತಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿ ಮಾಡಿದ ಗಣಪತಿ ಉಳ್ವೇಕರ್ ಅವರು ಈ ಹಿಂದೆ ನಗರಸಭೆ ಬರೆದ ಪತ್ರವನ್ನು ತೋರಿಸಿದರು. `ಈಗಾಗಲೇ ಕಾರವಾರ ನಗರಸಭೆಯ(Karwar CMC) ಸಾಮಾನ್ಯ ಸಭೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತ(Ambigara Choudayya Circle) ಎಂಬ ಹೆಸರಿಡಲು ಠರಾವು ಮಾಡಲಾಗಿದೆ. ಠರಾವಿನ ಪ್ರತಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ’ ಎಂದು ವಿವರಿಸಿದರು.
ಹೀಗಾಗಿ ಕಾರವಾರದ ಸೇಂಟ್ ಮೈಕಲ್ ಶಾಲೆಯ(St Michel School) ಎದುರು ಇರುವ ವೃತ್ತಕ್ಕೆ ನಿಜಶರಣ ಅಂಬಿಗರ ಚೌಡಯ್ಯ ವೃತ್ತ ಎಂದು ನಾಮಕರಣ ಮಾಡಲು ಆದೇಶಿಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು `ವೃತ್ತಕ್ಕೆ ಹೆಸರಿಡಲು ಯಾವುದೇ ಅಭ್ಯಂತರವಿಲ್ಲ. ಈ ಬಗ್ಗೆ ತುರ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಭರವಸೆ ನೀಡಿದರು. ಆದರೆ, ಇಲ್ಲಿ ಯಾವುದೇ ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ನೃತ್ಯಕ್ಕೂ ಸೈ, ಓದಿಗೂ ಜೈ. ಸಾಧನೆಯ ಶಿಖರದ ಶಿರಾಲಿಯ ಧನಲಕ್ಷ್ಮೀ ಮೊಗೇರಗೆ ವಿಧುಷಿ ಪಟ್ಟ.
ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ ಭೇದಿಸಿದ ರೋಚಕ ಕಥೆ
ಯುವಕನ ಮುಗಿಸಿದ ಮೂವರಿಗೆ ಗುಂಡಿನ ಎಚ್ಚರ ನೀಡಿದ ಪೊಲೀಸರು.
ಫೆಬ್ರುವರಿ ಎರಡರಿಂದ ಐದರವರೆಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ