ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಬಿಸಿಲಿನ ಝಳದಿಂದ ಪ್ರಾಣಿ ಪಕ್ಷಿಗಳು ತೀವ್ರವಾಗಿ ಬಳಲುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಜಾಲಿಯ ಸ್ವಾಮಿ ವಿವೇಕಾನಂದ(Swami Vivekananda) ಜನಸ್ಪಂದನ ಫೌಂಡೇಶನ್ ವತಿಯಿಂದ “ನೀರು ನೀಡಿ-ಜೀವ ಉಳಿಸಿ” ಅಭಿಯಾನವನ್ನು ಆಯೋಜಿಸಲಾಗಿದೆ.

ಈ ವರ್ಷ  ಅತಿಯಾದ ಬಿಸಿಲಿನ ವಾತಾವರಣ ಇರುವ  ಕಾರಣದಿಂದ  ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.  ಪ್ರಾಣಿ ಪಕ್ಷಿಗಳ ರಕ್ಷಣೆಯ ಕೈಂಕರ್ಯದಲ್ಲಿ ಸ್ಟ ಇಚ್ಛೆಯಿಂದ ತೊಡಗಿಕೊಂಡಿರುವವರಿಗೆ ಬಹುಮಾನ ನೀಡಿ ಉತ್ತೇಜಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಬೇಸಿಗೆಯ ಈ ಸುಡು ಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸಲು ಸಂಘಟಿಸಿರುವ ವಿಶಿಷ್ಟವೂ ವಿನೂತನವೂ ಆಗಿರುವ ಈ ಅಭಿಯಾನದಲ್ಲಿ ಹೆಚ್ಚು ಜನರು ಕೈಜೋಡಿಸಬೇಕು ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಈ ಅಭಿಯಾನದಲ್ಲಿ ಭಾಗವಹಿಸಿದವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಗುವುದು. ಮೊದಲ ಫಲಾನುಭವಿಗೆ 2000 ರೂ. ಎರಡನೇ ಫಲಾನುಭವಿಗೆ -1000 ರೂ. ಮೂರನೇ ಫಲಾನುಭವಿಗೆ – 500 ರೂ.ನಂತರದ 5 ಫಲಾನುಭವಿಗಳಿಗೆ ತಲಾ – 150 ರೂ.ನಂತೆ ಬಹುಮಾನ ನೀಡಿ ಉತ್ತೇಜಿಸಲಾಗುವುದು. ಈ ಅಭಿಯಾನದಲ್ಲಿ ಭಾಗವಹಿಸುವವರು ಕುಡಿಯಲು ಯೋಗ್ಯವಾದ ಜಾಗದಲ್ಲಿ – ತೊಟ್ಟಿಯಲ್ಲಿ ಅಥವಾ ಪಾತ್ರೆಗಳಲ್ಲಿ ತಾಜಾ ನೀರು ತುಂಬಿಸಿ, ಪ್ರಾಣಿ-ಪಕ್ಷಿಗಳಿಗೆ ಜೀವಜಲ ಒದಗಿಸಿ ಅದರ ಪೋಟೋ ತೆಗೆದು  ಸಂಪೂರ್ಣ ವಿಳಾಸದೊಂದಿಗೆ ಕೆಳಗೆ ತಿಳಿಸಿರುವ ಮೊಬೈಲ್ ನಂಬರಿಗೆ ಕಳುಹಿಸಬೇಕು. ಮಾರ್ಚ್ 29 ರ ಶನಿವಾರ ಫೋಟೋ ಕಳುಹಿಸಲು ಕೊನೆಯ ದಿನವಾಗಿದ್ದು ಮಾರ್ಚ್ 30 ರ ಯುಗಾದಿ ದಿನದಂದು ಆಯ್ಕೆಯಾದವರ ಮಾಹಿತಿಯನ್ನು ತಿಳಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು -ತಿಮ್ಮಪ್ಪ ಶೇಡ್ಲುಳಿ: 9964187923, ವಸಂತ್ ಬಬ್ಬನಕಲ್: 9986144540, ಸುರೇಶ್ ನಾಯ್ಕ : 97317 35728, ವೆಂಕಟೇಶ್ ದೇವಿನಗರ:9901192392,  ದೇವೇಂದ್ರ ಗೊಂಡ:  9611089065, ವೆಂಕಟ್ರಮಣ ನಾಯ್ಕ : 9591485388,  ಗಿರೀಶ್ ನಾಯ್ಕ :9900468641, ಶ್ರೀಧರ ಖಾರ್ವಿ : 7795979757.

ಇದನ್ನು ಓದಿ : ನೆನೆದವರ ಮನದ ಕಾಪ್ರಿ ದೇವರ ಜಾತ್ರೆಗೆ ಭಕ್ತ ಸಾಗರ.

ಶ್ವಾನ ಕಡಿತಕ್ಕೊಳಗಾದ ಮಹಿಳೆ ರೇಬಿಸ್ ರೋಗದಿಂದ ಸಾವು.

ಕುಟುಂಬ ಸಮೇತ ಶತ್ರು ಸಂಹಾರ ಪೂಜೆ ಸಲ್ಲಿಸಿದ ದರ್ಶನ್.

ಹುಲ್ಲಿನ ಬಣಿವೆಗೆ ಆಕಸ್ಮಿಕ ಬೆಂಕಿ. ಬಡ ರೈತನಿಗೆ ಲಕ್ಷಾಂತರ ರೂ ಹಾನಿ.