ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal): ತಮ್ಮ ವಿವಾಹ ವಾರ್ಷಿಕೋತ್ಸವವನ್ನು ದಂಪತಿಗಳು ಮಾದರಿಯಾಗಿ (Model Couple) ಆಚರಿಸಿಕೊಳ್ಳುವ ಮೂಲಕ ಸಮಾಜಕ್ಕೆ ಸಂದೇಶವೊಂದನ್ನ ನೀಡಿದ್ದಾರೆ.
ಭಟ್ಕಳದ ಮದ್ದಾರಮನೆಯ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ದಂಪತಿಗಳು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆ ಸಂದರ್ಭದಲ್ಲಿ ಯುವ ಸಾಹಿತಿ ಗಣಪತಿ ನಾಯ್ಕ ತಾನು ರಚಿಸಿದ “ನೀ ಬರೆಸಿದಂತೆ” ಕವನ(Poetry) ಸಂಕಲನವನ್ನು ಹಿರಿಯ ಸಾಹಿತಿ ಡಾ. ಸೈಯದ್ ಜಮೀರುಲ್ಲಾ ಷರೀಫ್ ಅವರ ಅಭಯ ಹಸ್ತದಿಂದ ಬಿಡುಗಡೆಗೊಳಿಸಿದ್ದರು.
ವೃತ್ತಿಯಲ್ಲಿ ಗಣಪತಿ ನಾಯ್ಕ ರೇಡಿಯಮ್ ಡಿಸೈನಿಂಗ್(Redium designing) ಮಾಡುತ್ತಿದ್ದು ತಮ್ಮ ಬಿಡುವಿನ ವೇಳೆ ಆಗಾಗ ಚುಟುಕು ಕವನ ಬರುತ್ತಿದ್ದು ಇವರ ಹವ್ಯಾಸವಾದ ಜೊತೆಯಲ್ಲಿ ಬಡವರಿಗೆ ನಿರ್ಗತಿಕರಿಗೆ ತಮ್ಮ ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ಸಹಾಯ ಮಾಡುತ್ತಿದ್ದರು. ಇದೀಗ ತಮ್ಮ ಮದುವೆ(Marriage) ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ 500 ಪುಸ್ತಕವನ್ನು ಪ್ರಕಟಿಸಿದ್ದು ಈ ಪುಸ್ತಕವನ್ನು ಮಾರಾಟ(Books Sale) ಮಾಡಿ ಬಂದಂತ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ಅಂದು ತಿಳಿಸಿದ್ದರು. ಗಣಪತಿ ನಾಯ್ಕ ಅವರಿಗೆ ಧರ್ಮ ಪತ್ನಿ ಚಾರ್ಟೆಡ್ ಅಕೌಂಟೆಂಟ್(Charted Accountant) ಉದ್ಯೋಗಿಯಾಗಿರುವ ವಿಮಲಾ ನಾಯ್ಕ ಕೂಡ ತಮ್ಮ ಪತಿಗೆ ಸಾಥ್ ನೀಡಿದ್ದರು.
ಹೀಗಾಗಿ “ನೀ ಬರೆಸಿದಂತೆ” ಕವನ ಸಂಕಲನ ಪುಸ್ತಕದಿಂದ ಮಾರಾಟ ಮಾಡಿದ ಬಂದ ಹಣವನ್ನು ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ನೀಡುವ ಮೂಲಕ ವಿವಾಹ ವಾರ್ಷಿಕೋತ್ಸವವನ್ನು (Wedding anniversary) ಆಚರಿಸಿಕೊಂಡಿದ್ದಾರೆ. ತಮ್ಮ ಮದುವೆ ದಿನ ನೀಡಿದ ಮಾತಿನಂತೆ ಇಂದು ತಾನು ಬರೆದ ಪುಸ್ತಕದ ಮಾರಾಟದ 25 ಸಾವಿರ ಹಣವನ್ನು ಭಟ್ಕಳ ತಾಲೂಕಿನ ಇಬ್ಬರು ಬಡ ಕ್ಯಾನ್ಸರ್ ರೋಗಿಗಳಿಗೆ (Cancer Patient) ನೀಡುವ ಮೂಲಕ ಈ ದಂಪತಿಗಳು ಸಮಾಜಕ್ಕೊಂದು ಉತ್ತಮ ಸಂದೇಶ ಸಾರಿದ್ದಾರೆ.
ಇಂದು ವಿಶ್ವ ಕ್ಯಾನ್ಸರ್ ದಿನವೂ(World Cancer Day) ಕೂಡ ಆಗಿರುವುದರಿಂದ ದಂಪತಿಗಳು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾನ್ಸರ್ ರೋಗಿಗಳಾದ 6 ವರ್ಷದ ಬಾಲಕನಿಗೆ ಹಾಗೂ ಓರ್ವ ಮಹಿಳೆಗೆ ಹಣವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ(Bhatkal Government Hospital) ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ವೈದ್ಯರಾದ ಲಕ್ಷ್ಮೀಶ ನಾಯ್ಕ ಸುರಕ್ಷಿತ ಶೆಟ್ಟಿ ಉಪಸ್ಥಿತರಿದ್ದರು.
ಇದನ್ನು ಓದಿ : ಕಾರವಾರದಲ್ಲಿ ಎಎಸ್ಐ ಮನೆಗೆ ಕನ್ನ ಹಾಕಿದ ಕಳ್ಳರು.
ತಂದೆಯ ಅಂತ್ಯಕ್ರಿಯೆಗೆ ಮೃತದೇಹ ಇಬ್ಬಾಗಿಸಿ ಕೊಡಿ. ವಿಚಿತ್ರ ಬೇಡಿಕೆಯಿಟ್ಟ ಪುತ್ರ.
ಪತ್ರಕರ್ತ ಸಂದೀಪ್ ಸಾಗರ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ
ಗೋ ಕಳ್ಳರಿಗೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾಕಿ. ಸಚಿವ ಮಾಂಕಾಳ್ ವೈದ್ಯ ಗುಡುಗು.