ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು(Mangaluru): ಸರಕು ತುಂಬಿಕೊಂಡು ಹೊರಟಿದ್ದ  ಹಡಗೊಂದು ಸಮುದ್ರ ಮಧ್ಯದಲ್ಲಿ   ಮುಳುಗಡೆಯಾದ(Drowned) ಘಟನೆ ನಡೆದಿದೆ.

ಮಂಗಳೂರು(Mangaluru) ಸಮುದ್ರ ತೀರದಿಂದ 60 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಎಂಎಸ್‌ವಿ ಸಲಾಮತ್ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಎಂದು ಹೇಳಲಾಗಿದ್ದು ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು. ಮೇ.18ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು.

ಹಡಗಿನಲ್ಲಿ ಒಟ್ಟು 06 ಭಾರತೀಯ ಸಿಬ್ಬಂದಿ ಮತ್ತು ಸಿಮೆಂಟ್ ಹಾಗೂ ನಿರ್ಮಾಣ ಸಾಮಗ್ರಿ ಇತ್ತು.  ತಾಂತ್ರಿಕ ಸಮಸ್ಯೆಯಿಂದ ಹಡಗಿನೊಳಗೆ ನೀರು ನುಗ್ಗಿದ್ದು,  ಮುಳುಗಿದೆ. ಈ ಸಂದರ್ಭದಲ್ಲಿ ಎಲ್ಲಾ ಆರು  ಸಿಬ್ಬಂದಿಗಳು  ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ  ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ನ ‘ವಿಕ್ರಂ’ ಶಿಪ್ ನಲ್ಲಿ ರಕ್ಷಣಾ ಕಾರ್ಯ ಮಾಡಲಾಗಿದೆ. ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ರಕ್ಷಣೆಗೊಳಗಾದವರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಎರಡು ವರ್ಷ ಕಳೆದ ʼಗ್ಯಾರಂಟಿ ಬದುಕುʼ ಸರ್ಕಾರದ ವಿಭಿನ್ನ ಜಾಹಿರಾತು.

ಪುಲ್ವಾಮಾದಲ್ಲಿ ಸೇನಾ ಪಡೆ ಕಾರ್ಯಾಚರಣೆ. ಮೂವರು ಉಗ್ರರ ಮಟಾಷ್.

ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮ*ಗೆ ಯತ್ನ. *ತಂದೆ ಮಗ ದುರ್ಮರಣ.