ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ (Udupi): ರಾಜ್ಯದ ಕರಾವಳಿಯಿಂದ ಮಹಾಕುಂಭ ಮೇಳಕ್ಕೆ (Mahakumbha Mela) ತೆರಳಲು ಸಂಸದ ಕೋಟ ಶ್ರೀನಿವಾಸ ಪೂಜಾರಿ(Kota Srinivasa ಪೂಜಾರಿ) ಅವರು ವಿಶೇಷ ರೈಲ್ವೆ( Special Train) ವ್ಯವಸ್ಥೆಗೆ ಕೋರಿದಂತೆ  ರೈಲ್ವೆ ಸಚಿವರು ಸ್ಪಂದಿಸಿದ್ದಾರೆ.

ಉಡುಪಿ(Udupi), ದಕ್ಷಿಣ ಕನ್ನಡ(Dakshinakannada), ಶಿವಮೊಗ್ಗ(Shivamogga), ಚಿಕ್ಕಮಗಳೂರು (Chikkamangluru) ಭಾಗದ ಭಕ್ತರಿಗೆ ಅನುಕೂಲವಾಗುವಂತೆ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ (Konkan route) ವಿಶೇಷ ಕುಂಭಮೇಳ ರೈಲು ಹೊರಡಲಿದೆ ಎಂದು  ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಫೆಬ್ರವರಿ 17ನೇ ತಾರೀಖು ಮಧ್ಯಾಹ್ನ 12.30ಗೆ ಉಡುಪಿಯಿಂದ ಹೊರಟ ರೈಲು 19ನೇ ತಾರೀಖಿನಂದು ಬೆಳಿಗ್ಗೆ 6.30ಗಂಟೆಗೆ ಪ್ರಯಾಗರಾಜ್(Prayagraj) ತಲುಪಲಿದೆ. ಹಾಗೂ ಮಾರನೇ ದಿನ 20ನೇ ತಾರೀಖಿನಂದು ಸಂಜೆ 6.30ಗಂಟೆಗೆ ಪ್ರಯಾಗರಾಜ್ ನಿಂದ ಹೊರಟು 22ರಂದು ಉಡುಪಿ(Udupi) ತಲುಪಲಿದೆ.

ಈ ರೈಲಿನಲ್ಲಿ ತೆರಳುವ ಪ್ರಯಾಣಿಕರಿಗೆ ಟಿಕೆಟ್ ವಿವರವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಪ್ರಯಾಗರಾಜ್ ತೆರಳಲಿರುವ ಯಾತ್ರಾರ್ಥಿಗಳು ಸಿದ್ಧತೆ ಮಾಡಿಕೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಮೈಕ್ರೋ ಫೈನಾನ್ಸ್ ಆರ್ಭಟಕ್ಕೆ ಮುಗುದಾರ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ.

ಶರಾವತಿ ಸೇತುವೆ ಮೇಲೆ ಅಪಘಾತ. ಬೈಕ್ ಸವಾರ ಸಾವು.

ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ. ಸೈರನ್ ಗೆ ಎದ್ದು ಬಿದ್ದು ಕಾಲ್ಕಿತ್ತ ಕಳ್ಳರು.

ಪದೇಪದೇ ಫೈನ್ ಕಟ್ಟುವ ಪತ್ನಿ. ಇದು ಗಂಡ ಮಾಡಿದ ಕಿತಾಪತಿ