ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ( Bhatkal) : ವ್ಯಕ್ತಿಯೋರ್ವರ ಖಾತೆಯಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಹಣವನ್ನ ಸೈಬರ್ ವಂಚಕರು(ಸೈಬರ್ Cheaters) ಎಗರಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ತಾಲೂಕಿನ ಬೆಳಕೆಯಲ್ಲಿರುವ ಕೆನರಾ ಬ್ಯಾಂಕ್ (Belke Canara Bank) ಶಾಖೆಯಲ್ಲಿನ ಖಾತೆಗೆ ವಂಚಕರು ಕನ್ನ ಹಾಕಿದ್ದಾರೆ. ಬೆಳಕೆಯ ಜಗದೀಶ ಲಚ್ಚಯ್ಯ ನಾಯ್ಕ ಅವರು ತಮ್ಮ ಖಾತೆಯಿಂದ ಹಣ ಕಳೆದುಕೊಂಡವರಾಗಿದ್ದಾರೆ. ಕೆನರಾ ಬ್ಯಾಂಕಿನ ಬೆಳಕೆ ಶಾಖೆಯಲ್ಲಿ ಜಗದೀಶ ತಮ್ಮ ಖಾತೆ ಹೊಂದಿದ್ದಾರೆ. ಯಾರೋ ಆಗುಂತಕರು ಫೆಬ್ರವರಿ 8 ರಿಂದ 9ರ ಬೆಳಗ್ಗೆ 8-20 ಗಂಟೆಯ ವರೆಗೆ ಅವಧಿಯಲ್ಲಿ ಇವರ ಖಾತೆಯಲ್ಲಿದ್ದ ಒಟ್ಟೂ 2021452 ರೂಪಾಯಿ ಹಣವನ್ನು ವರ್ಗಾವಣೆ(Money Transfer) ಮಾಡಿಕೊಂಡಿದ್ದಾರೆ
ತಾವೂ ಆನ್ಲೈನ್ ಮೋಸ ಹೋದ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ (Bhatkal Rural Station) ಜಗದೀಶ ನಾಯ್ಕ ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ಕರಾವಳಿಯಿಂದ ಮಹಾ ಕುಂಭಮೇಳಕ್ಕೆ ವಿಶೇಷ ರೈಲು.
ಮೈಕ್ರೋ ಫೈನಾನ್ಸ್ ಆರ್ಭಟಕ್ಕೆ ಮುಗುದಾರ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಶರಾವತಿ ಸೇತುವೆ ಮೇಲೆ ಅಪಘಾತ. ಬೈಕ್ ಸವಾರ ಸಾವು.
ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ. ಸೈರನ್ ಗೆ ಎದ್ದು ಬಿದ್ದು ಕಾಲ್ಕಿತ್ತ ಕಳ್ಳರು.