ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕಾರವಾರ (Karwar) : ಹೊಟ್ಟೆಪಾಡಿಗೋಸ್ಕರ ಲಾರಿಯಲ್ಲಿ ತೆರಳುತ್ತಿದ್ದ ಸವಣೂರಿನ(Savanuru) ವ್ಯಾಪಾರಿ ಬಂಧುಗಳ ಸಾವಿಗೆ ಕಾರವಾರದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಶ್ರದ್ಧಾಂಜಲಿ(Tribute) ಸಲ್ಲಿಸಿದ್ದಾರೆ.
ಗುರುವಾರ ಸಂಜೆ ನಗರದ ಹೂ ಮತ್ತು ಹಣ್ಣಿನ ಮಾರುಕಟ್ಟೆ ಸಮೀಪ ಸೇರಿದ ಬೀದಿ ಬದಿಯ ಹೂ, ಹಣ್ಣು, ತರಕಾರಿ ವ್ಯಾಪಾರಸ್ತರು ಅಗಲಿದ ಸಹವ್ಯಾಪಾರಿಗಳಿಗೆ ನಮನ ಸಲ್ಲಿಸಿದರು. ಮೇಣದಬತ್ತಿ ಬೆಳಗಿ(Candle Light) ಒಂದು ನಿಮಿಷ ಮೌನಾಚರಣೆ ಮಾಡಿ ಕಂಬನಿ ಮಿಡಿದರು.
ಕಾರವಾರ ಶಾಸಕ ಸತೀಶ್ ಸೈಲ್(Karwar MLA Satish Sail) ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಂತಾಪ ಸೂಚಿಸಿದರು. ಜನಶಕ್ತಿ ವೇದಿಕೆ(Janashakti Vedike) ಅಧ್ಯಕ್ಷ ಮಾಧವ ನಾಯಕ, ನಗರಸಭೆ ಆಯುಕ್ತರಾದ ಜಗದೀಶ ಹುಲಿಗೆಜ್ಜಿ ಉಪಸ್ಥಿತರಿದ್ದು ಭಾವಪೂರ್ಣವಾಗಿ ಮಾತನಾಡಿದರು.
ಸಂತಾಪ ಸಭೆಯಲ್ಲಿ ದೀಪಕ ಕುಡಾಲಕರ, ಜಿ ಪಿ ನಾಯಕ, ಸಮೀರ ನಾಯ್ಕ, ಅಬ್ಬಾಸ್ ಏ ಮುಲ್ಲಾ, ಫಕೀರಪ್ಪ ದ ಭಂಡಾರಿ, ಅಜೀಜ್ ಮುಸ್ತಾಫಾ, ಸಂದೀಪ ತಳೆಕರ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ(.ರಿ )ಕಾರವಾರ ತಾಲೂಕಾ ಪದಾಧಿಕಾರಿಗಳು ಸಮಸ್ತ ಬೀದಿ ಬದಿ ವ್ಯಾಪಾರಿಗಳ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಬುಧವಾರ ನಸುಕಿನ ಜಾವ ಕುಮಟಾ ಸಂತೆಗೆ(Kumta sante) ತೆರಳುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ಗುಳ್ಳಾಪುರ ಸಮೀಪ 10 ವ್ಯಾಪಾರಿಗಳು ಮೃತರಾಗಿದ್ದರು. ಹಲವರು ಗಾಯಗೊಂಡಿದ್ದರು. ಘಟನೆ ತರಕಾರಿ, ಹೂ ಹಣ್ಣು ವ್ಯಾಪಾರಿಗಳಿಗೆ ಆಘಾತ ಉಂಟುಮಾಡಿತ್ತು.
ಇದನ್ನು ಓದಿ : ಕರ್ನಾಟಕ ಎಕ್ಸ್ಪ್ರೆಸ್ ಟ್ರೈನ್ ಅಪಘಾತ. 11 ಪ್ರಯಾಣಿಕರ ದುರ್ಮರಣ.
ಟೆಂಪೋ ಅಪಘಾತ. ಓರ್ವ ಸಾವು. ನಾಲ್ವರಿಗೆ ಗಾಯ.
ಯಲ್ಲಾಪುರ ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ರಾಜ್ಯ ಹಾಗೂಕೇಂದ್ರದಿಂದ ಪರಿಹಾರ ಘೋಷಣೆ
ಭಟ್ಕಳದಲ್ಲಿ ಗೋಮಾಂಸ ಅಡ್ಡೆಗೆ ನುಗ್ಗಿದ ಪೊಲೀಸರು. ಮೂವರು ಆರೆಸ್ಟ್.
ಯಲ್ಲಾಪುರದಲ್ಲಿ ಭೀಕರ ಅಪಘಾತ. ಹತ್ತು ಜನರ ದುರ್ಮರಣ.
ತಿರುಪತಿಯಲ್ಲಿ ಕರ್ನಾಟಕ ಯಾತ್ರಿಕರಿಗೆ ಇನ್ಮುಂದೆ ವಸತಿ ವ್ಯವಸ್ಥೆ ಸಿದ್ದ.