ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ವಾಣಿಜ್ಯ ಬಂದರು ವಿಚಾರದಲ್ಲಿ ಮೀನುಗಾರರ ಮೇಲೆ ಆಗುತ್ತಿರುವ ಪರಿಣಾಮವನ್ನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ಹೇಳಿದ್ದಾರೆ.

ಕರಾವಳಿ ಭಾಗದ ಸೈನಿಕರಿದ್ದಂತೆ. ಹೊನ್ನಾವರ ತಾಲೂಕಿನ(Honnavar Taluku) ಕಾಸರಕೋಡ ಟೊಂಕಾ(Kasarakodu Tonka) ಭಾಗದ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನ ಅವರು ಖಂಡಿಸಿದ್ದಾರೆ. ಸ್ಥಳೀಯ ಮೀನುಗಾರರು ವಾಣಿಜ್ಯ ಬಂದರಿನ(Commercial port)  ಬಗ್ಗೆ ವಿರೋಧಿಸುತ್ತಿದ್ದಾರೆ ಅಂದರೆ ಅವರಿಗೆ ಅದರಿಂದ ಸಮಸ್ಯೆ ಇದೆ ಅಂಥ ಅರ್ಥ. ಅವರೆಲ್ಲರೂ ಮೀನು ಕೃಷಿಯನ್ನು ಅವಲಂಬಿಸಿಕೊಂಡವರು. ಅದರ ಹೊರತಾಗಿ ಅವರಿಗೆ ಜೀವನಕ್ಕೆ ಬೇರೆ ದಾರಿ ಇಲ್ಲ. ಹೀಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು  ಮೀನುಗಾರ ಮುಖಂಡರೊಂದಿಗೆ ಒಂದಡೆ ಕುಳಿತು ಈಗ ಗುರುತಿಸುವ ಜಾಗದ ಪರ್ಯಾಯವಾಗಿ ಬೇರೆ ಜಾಗದಲ್ಲಿ ಬಂದರು ನಿರ್ಮಾಣದ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುವ ಕಾರ್ಯ ಮಾಡಬೇಕಾಗಿದೆ ಎಂದಿದ್ದಾರೆ.

ಸರ್ಕಾರದ ಯೋಜನೆಗಳು(Government Project) ಬರಬೇಕು. ನಮ್ಮ ಹೊನ್ನಾವರದ ಭಾಗ ಅಭಿವೃದ್ಧಿ ಆಗಬೇಕು. ಆದರೆ ಮೀನುಗಾರರಿಗೆ ಯಾವುದೇ ತೊಂದರೆ ಆಗಬಾರದು. ಇದರ ಬಗ್ಗೆ ಎಲ್ಲರೂ ಕುಳಿತು ಚರ್ಚೆ ಮಾಡಿ ಮೀನುಗಾರರನ್ನ ರಕ್ಷಿಸಬೇಕು. ಮೀನುಗಾರರು (Fishermans) ಮೀನು ಹಿಡಿದು ಬಂದು ಸಂಸಾರವನ್ನು ನಡೆಸುತ್ತಿದ್ದಾರೆ. ಅವರ ಕುಟುಂಬ ನಿರ್ವಹಣೆಗೆ ಸಮಸ್ಯೆ ಆಗದೆ ರೀತಿಯ ಅಭಿವೃದ್ದಿ ನಡೆಯಲಿ. ಇದರ ಬಗ್ಗೆ ಯಾರು ಕೂಡ ನಿರ್ಲಕ್ಷ ಮಾಡಬಾರದು. ನಾವೆಲ್ಲರೂ ಮೀನುಗಾರರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : ಲೋಕಾಯುಕ್ತ ಬಲೆಗೆ ಬಿದ್ದ ಎಪಿಪಿ. ಮುದ್ದೆಮಾಲಿಗೆ ಬೇಡಿಕೆ.

ಗೋಕರ್ಣ ಸನ್ನಿಧಿಯಲ್ಲಿ ಪಿಎಸ್ಐ ಸಂಸ್ಕಾರ ಅನಾವರಣ. ಭಕ್ತರ ಮುಂದೆ ಎಎಸ್ಐ ಗೆ ಹೊಡೆಯಲು ಏನು ಕಾರಣ?

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಜರಿ ಗೋಡೌನ್ ಗೆ ಬೆಂಕಿ. ಸಂಚಾರ ವ್ಯತ್ಯಯ.