ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar):  ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ದೇವಾಲಯ ಕಳ್ಳತನ(Temple Theft) ಮುಂದುವರಿದಿದೆ.

ಸಾಯಿಕಟ್ಟಾ ಶ್ರೀ ಸಾಯಿಮಂದಿರದಲ್ಲಿ (Saikatta Sai Mandira) ಮಂಗಳವಾರ ಬೆಳಗಿನ ಜಾವದ ವೇಳೆ ಕಳ್ಳರ ಕೃತ್ಯ ನಡೆಸಿದ್ದಾರೆ. ದೇವಾಲಯದ ಮುಂಬಾಗಿಲಿನ ಲಾಕ್ ಒಡೆದು ಒಳ ನುಗ್ಗಿದ ಕಳ್ಳರು ದೇವರ ಬೆಳ್ಳಿಯ ಆಭರಣಗಳ(Silver Ornaments) ಕಳ್ಳತನ ಮಾಡಿದ್ದಾರೆ.

ಬೆಳ್ಳಿಯ ಪಾದುಕೆ, ಸಿಂಹದ ಕವಚ, ದೇವರ ಮೇಲ್ಭಾಗದಲ್ಲಿರುವ ಬೆಳ್ಳಿಯ ಕೊಡೆ ಸೇರಿದಂತೆ ಇತರ ವಸ್ತುಗಳ ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಇಬ್ಬರು ಕಳ್ಳರಿಂದ ದೇವಾಲಯದೊಳಗೆ  ಕೃತ್ಯ ನಡೆದಿದ್ದು ಸುಮಾರು 10ರಿಂದ 12 ಕೆಜಿ ಯಷ್ಟು ಬೆಳ್ಳಿಯ ಆಭರಣಗಳನ್ನ ಕದ್ದಿದ್ದಾರೆ.

ಬೆಳಿಗ್ಗೆ ದೇವಾಲಯದ ಅರ್ಚಕರು ಬಾಗಿಲು ತೆಗೆಯುವ ಸಂದರ್ಭದಲ್ಲಿ ಕಳ್ಳತನ ಆಗಿರೋದು ಗೊತ್ತಾಗಿದೆ. ಕಾರವಾರ ನಗರ ಠಾಣೆ ಪೊಲೀಸರಿಗೆ (Karwar Town Police) ಮಾಹಿತಿ ರವಾನಿಸಿದ್ದು  ಸ್ಥಳಕ್ಕೆ ಆಗಮಿಸಿ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: ನಗೆ ಗ್ರಾಮದ ಶಿಕ್ಷಕರ ಮಾದರಿ ಕಾರ್ಯ. ಶಾಲಾ ಮಕ್ಕಳಿಗಾಗಿ ರಸ್ತೆ ನಿರ್ಮಾಣ

ಭಟ್ಕಳದಲ್ಲಿ ಜೈ ಭೀಮ್ ಯುವ ಸೇನೆ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ.