ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ತಾಲೂಕಿನ ಕುಗ್ರಾಮ ನಗೆ ಗ್ರಾಮದ (Nage Village) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ|| ಬಾಬಾ ಸಾಹೇಬ ಅಂಬೇಡ್ಕರ್(Baba Saheb Ambedkar) ಅವರ 134ನೇ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಾಬಾ ಸಾಹೇಬ ಅಂಬೇಡ್ಕರ್ ಅವರ ನಿಜ ಜೀವನ ಮತ್ತು ಅವರ ಆದರ್ಶಗಳನ್ನು ಮಕ್ಕಳು ತಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಲು ತಿಳಿ ಹೇಳುವುದರ ಮೂಲಕ ನಮ್ಮ ಭಾರತ ದೇಶಕ್ಕೆ ಸಂವಿಧಾನ ರಚಿಸಿ ಅದರ ನಡಾವಳಿಗಳನ್ನು ಸರಕಾರದ ಪ್ರಣಾಳಿಕೆಯಲ್ಲಿ ಹಾಗೂ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ, ಸಂವಿಧಾನದಲ್ಲಿರುವ ಮೂಲಭೂತ ಉದ್ದೇಶಗಳನ್ನು ಸಾರುವಂತಹ ಧೈಯೋದ್ದೇಶಗಳನ್ನು ಮನಗಾಣುವಂತೆ ನಾವುಗಳು ಶ್ರಮ ವಹಿಸಬೇಕು ಎಂದು ಮಕ್ಕಳಿಗೆ ತಿಳಿಸಲಾಯಿತು.
ರೂಪಾ ಉಮೇಶ ನಾಯ್ಕ ಅವರು ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿದರು. ಎಸ್.ಡಿ.ಎಂ.ಸಿ. ನಾಗಿ ಪಾಂಡುರಂಗ ಗೌಡ ಪುಷ್ಪಗುಚ್ಚ ಸಲ್ಲಿಸಿದರೆ ಶಾಲಾ ಮಕ್ಕಳು ಹೂಹಾರವನ್ನು ಸಮರ್ಪಿಸಿದರು.
ಮುಖ್ಯ ಶಿಕ್ಷಕರಾದ ಅಖ್ತರ್ ಜೆ. ಸಯ್ಯದ್ ಅಂಕೋಲಾ ಪುಷ್ಪ ನಮನ ಮಾಡಿದರು. ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ 7ನೇ ವರ್ಗದ ಮಕ್ಕಳಾದ ಭಾಗ್ಯಶ್ರೀ ಗೌಡ, ಮೋನಿಕಾ ಗೌಡ, ಶಾಲಿನಿ ಗೌಡ, ದೇವರಾಜ ಗೌಡ, ಶಾಂತಾ ಗೌಡ, ಹರೀಶ ಗೌಡ, ಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಅಡುಗೆ ಸಿಬ್ಬಂದಿಗಳಾದ ಶೋಭಾ ಗಣಪತಿ ಗೌಡ, ಕಾಂಚನಾ ಜೈವಂತ ಗೌಡ ಉಪಸ್ಥಿತರಿದ್ದರು.
ಶಿಕ್ಷಕರಾದ ಅಖ್ತರ್ ಜೆ. ಸಯ್ಯದ್ ಅಂಕೋಲಾ ಅವರು, ಶಾಲೆಯ ಬಿಸಿಯೂಟ ಕೇಂದ್ರದ ತರಕಾರಿಗಳನ್ನು ಶೇಖರಿಸಿಡುವ ಸಲುವಾಗಿ ಡಬಲ್ ಡೋರಿನ ಸ್ಯಾಮ್ ಸಂಗ್ ಕಂಪನಿಯ ಪ್ರಿಡ್ಜ್ ಕೊಡುಗೆಯಾಗಿ ಶಾಲೆಗೆ ನೀಡಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಅವರು, ಹಿಂದುಳಿದ ಗ್ರಾಮವಾಗಿರುವುದರಿಂದ ಕೆಲವೇ ಮನೆಗಳಲ್ಲಿ ಪ್ರಿಡ್ಜ್ ಬಳಸುವ ಬಗ್ಗೆ ಪಾಲಕರಲ್ಲಿ ತಿಳುವಳಿಕೆ ಇದ್ದು ಎಲ್ಲಾ ಮಕ್ಕಳಿಗೂ ಶಾಲೆಯಲ್ಲಿ ಪ್ರಿಡ್ಜ್ನ ಉಪಯೋಗಗಳನ್ನು ತಿಳಿದುಕೊಳ್ಳಲು ಇದು ಪ್ರಯೋಜನವಾಗಲಿದೆ. ಕಾರವಾರ ತಾಲೂಕಿಗೆ ಇದೊಂದು ಮಾದರಿ ಕೊಡುಗೆಯಾಗಿದೆ ಎಂದರು.
ಇಲ್ಲಿ ಅಭಿವೃದ್ಧಿಗಾಗಿ ಹೆಚ್ಚಿನ ಹಣವನ್ನು ಅಖ್ತರ ಜೆ. ಸಯ್ಯದ್ ಅವರು ಬರಿಸಿದ್ದು ಶಾಲಾ ಮಕ್ಕಳ ಶಿಕ್ಷಕರ ಸಹಕಾರವೂ ಅದರಲ್ಲಿದೆ ಈ ರೀತಿ ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಕೊಡುವ ಮನಸ್ಸು ಇರಬೇಕು. ಅದನ್ನು ಜೋಪಾನವಾಗಿಟ್ಟುಕೊಳ್ಳಲು ಎಲ್ಲರ ಸಹಕಾರ ಇದ್ದಲ್ಲಿ ಸಾಧ್ಯ ಎಂದು ಗ್ರಾಮದ ಬಸು ಗೌಡ ಅವರು ಅಭಿಪ್ರಾಯ ಪಟ್ಟರು. ಭಾಗ್ಯಶ್ರೀ ಗೌಡ ವಂದಿಸಿದರು.
ಇದನ್ನು ಓದಿ : ನಗೆ ಗ್ರಾಮದ ಶಿಕ್ಷಕರ ಮಾದರಿ ಕಾರ್ಯ. ಶಾಲಾ ಮಕ್ಕಳಿಗಾಗಿ ರಸ್ತೆ ನಿರ್ಮಾಣ