ಬಾಗಲಕೋಟೆ : ದೇಶದಲ್ಲೆಡೆ ಕ್ರಿಕೆಟ್ ಜ್ವರ ಜಾಸ್ತಿಯಾಗುತ್ತಿದೆ.     ದೇಶದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಎಲ್ಲರ ಕಣ್ಮಣಿಯಾಗಿದ್ದಾನೆ. ಅಭಿಮಾನಿ ಚಿತ್ರ ಕಲಾವಿದರೊಬ್ಬರು ರಕ್ತದ ಮೂಲಕ ಬಿಡಿಸಿದ ಕೊಹ್ಲಿ ಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರನ್ನಬೆಳಗಲಿಯಲ್ಲಿ ಶಿವಾನಂದ ನೀಲಣ್ಣವರ ಎಂಬ ಅಭಿಮಾನಿ ತನ್ನ ರಕ್ತದಲ್ಲಿ ಬಿಡಿಸಿದ ಕೊಹ್ಲಿ ಚಿತ್ರಕ್ಕೆ ಮಾರುತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಅಭಿಮಾನ ಮೆರೆದಿದ್ದಾರೆ.

ಇಂದಿನ ಆರ್ ಸಿ ಬಿ ಹಾಗೂ ರಾಜಸ್ಥಾನ ಪಂದ್ಯದಲ್ಲಿ  ಆರ್ ಸಿ ಬಿ ಗೆದ್ದು ಬರಲಿ ಎಂದು ದೇವರಲ್ಲಿ ಚಿತ್ರ ಕಲಾವಿದ ಶಿವಾನಂದ ನೀಲಣ್ಣವರ  ಪ್ರಾರ್ಥನೆ ಮಾಡಿದ್ದಾರೆ. ರಕ್ತದಿಂದ‌ ಕೊಹ್ಲಿ  ಚಿತ್ರ ಬಿಡಿಸಿರುವ  ಶಿವಾನಂದ ಅವರ ಕಲೆಗೆ ಇಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ