ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ಭಾರತವು ವೈವಿಧ್ಯತೆಯ ಶ್ರೇಷ್ಠ ಧಾರ್ಮಿಕ ಆಚರಣೆಗಳೊಂದಿಗೆ ಭಾಷೆ, ಜಾತಿ,ಲಿಂಗ ಸಂಪ್ರದಾಯಗಳ ಸಂಯೋಜನೆಯೊಂದಿಗೆ ನಮ್ಮ ಸಂಸ್ಕೃತಿಯು ಇನ್ನಿತರ ದೇಶಗಳ ಮೇಲೆ ಪ್ರಭಾವ ಬೀರಿ ಏಕತೆಯನ್ನು ಜಗತ್ತಿಗೆ ಸಾರಿರುವದು ನಮ್ಮ ಹೆಮ್ಮೆ ಎಂದು ಕಾರವಾರ ಕ್ರಿಮ್ಸ್ ನೇತ್ರ ತಜ್ಞ ಡಾ.ಗಜಾನನ ತುಳಸಿದಾಸ ನಾಯ್ಕ ಹೇಳಿದರು.
ಅವರು ಕಾರವಾರ ತಾಲ್ಲೂಕಿನ ಅಸ್ನೋಟಿ ಗ್ರಾಮ ಪಂಚಾಯತ ಆವರಣದಲ್ಲಿ ಆಯೋಜಿಸಿದ್ದ 76 ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭಾರತ ಯಾವಾಗಲೂ ಭವ್ಯತೆಯ ರಾಷ್ಟ್ರವೇ ಇಲ್ಲಿ ಜನ್ಮಪಡೆದಿರುವ ನಾವು ಭಾಗ್ಯಶಾಲಿಗಳು ಇಂತಹ ಸ್ಮರಣೀಯ ವೇದಿಕೆಗೆ ಬಂದಿರುವದು ಮನದ ಸಂಭ್ರಮವನ್ನು ಹೆಚ್ಚಿಸಿದೆ. ನನ್ನ ಜನ್ಮಭೂಮಿ ಋಣವನ್ನು ತೀರಿಸಲು ನಾವೆಲ್ಲರೂ ಕಂಕಣಬದ್ಧರಾಗೋಣವೆಂದು ಮಾರ್ಮಿಕವಾಗಿ ನುಡಿದರು.
ಗೌರವ ಅತಿಥಿಗಳಾದ ನಾರಾಯಣ ದೇಸಾಯಿ ಶುಭ ಕೋರಿದರು. ಸನ್ಮಾನಿತರಾದ ಡಾ.ಪ್ರಜ್ಯೂತ ಮಹಾಲೆ ಹಾಗೂ ಡಾ.ಸೀಯಾ ಶ್ಯಾಮಕುಮಾರ ದೇಸಾಯಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಸಂಜಯ ಗಣಪತಿ ಸಾಳುಂಕೆ ಮಾತನಾಡಿ, ಭಾರತವು ಪ್ರಜಾಪ್ರಭುತ್ವ, ಸಾರ್ವಭೌಮತ್ವ ಮತ್ತು ಜಾತ್ಯತೀತ ರಾಷ್ಟ್ರ ಇಲ್ಲಿ ಪ್ರತಿಯೊಬ್ಬರೂ ಸಮಾನರು ಈ ದಿನವನ್ನು ದೇಶವೇ ಸಂಭ್ರಮಿಸುತ್ತದೆ ಅಷ್ಟೇ ಸಂಭ್ರಮದಲ್ಲಿ ನಾವೆಲ್ಲರೂ ಕೂಡಿದ್ದೇವೆ.ನಮ್ಮ ಪಂಚಾಯತಿ ಮಾದರಿ ಪಂಚಾಯತಿಯಾಗಿ ಹೊರಹೊಮ್ಮಿದೆ ಅದಕ್ಕೆಲ್ಲ ತಮ್ಮ ಸಹಕಾರವೆ ಕಾರಣ, ಇಪ್ಪತ್ತು ವರ್ಷಗಳಿಂದ ಸೇವೆ ಮಾಡಲು ಅವಕಾಶ ಕಲ್ಪಿಸಿರುವ ತಮಗೆ ಕೃತಜ್ಞತೆಯನ್ನು ಅರ್ಪಿಸುವೆ ಎಂದು ಭಾವನಾತ್ಮಕ ನುಡಿಗಳನ್ನು ನುಡಿದರು.
ವೇದಿಕೆಯ ಮೇಲೆ ಗ್ರಾ.ಪಂ.ಉಪಾಧ್ಯಕ್ಷ ಅಶ್ವಿನಿ ಮ್ಹಾಳ್ಸೇಕರ ಸದಸ್ಯರಾದ ಪೂಜಾ ಕೋಠಾರಕರ, ಶ್ಯಾಮ್ ನಾಯ್ಕ, ನಿರ್ಮಲಾ ಪರವಾರ, ತನ್ವಿ ನಾಯ್ಕ, ಸುಧಾ ನಾಯ್ಕ ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ಅಂಗವಾಗಿ ಶಾಲೆಗಳ ವಿದ್ಯಾರ್ಥಿಗಳಿಂದ ಭಾಷಣ,ದೇಶಭಕ್ತಿ,ರಂಗೋಲಿ ಸ್ಪರ್ಧೆ ಹಾಗೂ ಪಂಚಾಯತಿಯ ಮಾಜಿ ಅಧ್ಯಕ್ಷರು, ಶಿಕ್ಷಕರು, ನಿವೃತ್ತ ನೌಕರರು, ಮಾಜಿ ಸೈನಿಕರು, ವೈದ್ಯರು,ಸಮಾಜ ಸೇವಕರಾದಿಯಾಗಿ ಒಟ್ಟು ನಾಲ್ವತ್ತು ಸಾಧಕರಿಗೆ ಸತ್ಕರಿಸಲಾಯಿತು.
ನಾಗವೇಣಿ ತಳೇಕರ ಸಂಗಡಿಗರ ದೇಶಭಕ್ತಿ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕ ಡಾ.ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ ನಿರೂಪಿಸಿದರು.ಇಂಜಿನಿಯರ್ ಗಿರೇಶ ದೇಸಾಯಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಹೊಸಮನಿ ವಂದಿಸಿದರು.
ಇದನ್ನು ಓದಿ : ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ. ಒಂಬತ್ತು ಭಾರತೀಯರ ದುರ್ಮರಣ.
ಶಿರಸಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ. ಆತಂಕಗೊಂಡು ಓಡಿದ ನಾಗರಿಕರು.
ಕುಂಭಮೇಳದಲ್ಲಿ ಇಂದು 10ಕೋಟಿ ಭಕ್ತರ ಸಂಗಮ. ಪ್ರಧಾನಿ ಮೋದಿ ಪ್ರತಿಕ್ರಿಯೆ.