ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಮನೆ ಕಳ್ಳತನ (,House Theft) ಮಾಡಿದ ಆರೋಪದ ಮೇಲೆ ಯುವಕನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದಲ್ಲಿ(Asnoti Village) ನಡೆದಿದೆ.
ಜೋಯಿಡಾ ತಾಲೂಕಿನ ಸಮೀರ್ ದೇಸಾಯಿ ಧರ್ಮದೇಟು ತಿಂದವ. ಅಸ್ನೋಟಿಯ ಸುರಕ್ಷಾ ಸಾಳಂಕೆ ಎಂಬುವವರ ಮನೆಯಲ್ಲಿ ಎರಡು ದಿನಗಳ ಹಿಂದೆ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಶಂಕೆ ವ್ಯಕ್ತವಾಗಿತ್ತು.
ಸಮೀರ್ ಕಳ್ಳತನ ಮಾಡಿದ ನಂತರ ಊರಿನಿಂದ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಆದರೆ ಭಾನುವಾರ ರಾತ್ರಿ ಅಸ್ನೋಟಿಗೆ ವಾಪಸ್ ಬಂದಾಗ ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಕಟ್ಟಿಹಾಕಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ (Chittakul Police Station) ಪ್ರಕರಣ ದಾಖಲಾಗಿದೆ.
ಈತನ ಮೇಲೆ ಕಳ್ಳತನದ ಹಲವು ಆರೋಪಿಗಳಿದ್ದು ಆಗಾಗ ಕಳ್ಳತನ ಮಾಡಿ ಸಿಕ್ಕಿ ಬೀಳುವುದು ಈತನ ಖಯಾಲಿಯಾಗಿದೆ.
ಇದನ್ನು ಓದಿ : ಕನ್ನಡದ ಪ್ರಖ್ಯಾತ ಹಾಸ್ಯ ನಟ ಸಾವು.