ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ತಿರುಪತಿ(Tirupati) : ಮೊನ್ನೆಯಷ್ಟೇ ದೇವರ ದರ್ಶನದ ಟೋಕನ್ ಗಾಗಿ ಕಾಲ್ತುಳಿತ ಉಂಟಾಗಿ ಬಾರೀ ಅನಾಹುತ ಆದ ಘಟನೆ ಮಾಸುವ ಮುನ್ನವೇ ಆಂಧ್ರಪ್ರದೇಶದ(Andrapradesh) ತಿರುಪತಿ ತಿರುಮಲ ದೇವಾಲಯದ(Tirupati tirumala Temple) ಲಡ್ಡು ಪ್ರಸಾದ (Laddu Prasadam) ನೀಡುತ್ತಿದ್ದ ಕೌಂಟರ್‌ನಲ್ಲಿ  ಅಗ್ನಿ ಅವಘಡ ಸಂಭವಿಸಿದೆ.

ಕಂಪ್ಯೂಟರ್‌ಗೆ ಹೊಂದಿಕೊಂಡಿದ್ದ ಯುಪಿಎಸ್‌ನಲ್ಲಿ (Upsc) ಶಾರ್ಟ್ ಸರ್ಕೀಟ್ ಉಂಟಾದ ಕಾರಣ 47ನೇ ಕೌಂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಬೇರೆಡೆ ಹರಡುವುದನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಟಿಟಿಡಿ(TTD) ಹೇಳಿದೆ.

ಅಗ್ನಿ ಅನಾಹುತ ಆಗುತ್ತಿದ್ದಂತೆ  ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಜನ ಓಡಿ ಹೋಗಿದ್ದಾರೆ. ಹೀಗಾಗಿ ತಿರುಪತಿಯಲ್ಲಿ ಮತ್ತೆ  ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಇದನ್ನು ಓದಿ : ಬ್ರಿಟಿಷ್ ನೌಕಾ ಪಡೆಯಿಂದ ಮೀನುಗಾರರ ಬಂಧನ.

ಹಸುವಿನ ಮೇಲೆ ವಿಕೃತಿ ಮೆರೆದ ಮತಾಂಧನ ಬಂಧನ.

ಬೈಕ್ ಅಪಘಾತಪಡಿಸಿದ್ದಲ್ಲದೆ, ಮಾರಕ ಹಲ್ಲೆ. ಕಾರವಾರದಲ್ಲಿ ಹೆಚ್ಚಾಯ್ತು ನೌಕಾ ಸೈನಿಕರ ದೌರ್ಜನ್ಯ.

ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸಿ ತಿದ್ದಿಕೊಳ್ಳುತ್ತೇನೆ. ರಾಜಕೀಯ ಕಾರಣಕ್ಕೆ ಸುಳ್ಳೇ  ಟೀಕಿಸಿದರೆ ಐ ಡೋಂಟ್ ಕೇರ್: ಸಿ.ಎಂ ಖಡಕ್ ಮಾತು

ಗ್ರಾಸಿಮ್ ಇಂಡಸ್ಟ್ರೀ ಸೋರಿಕೆ ಪ್ರಕರಣ. ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿ.