ಶಿರಸಿ (Sirsi): ಸಂಸದರು ಸಾಕಿದ ಮುದ್ದಿನ ಶ್ವಾನಕ್ಕೆ ನಸುಕಿನ ಜಾವ ಚಿರತೆಯೊಂದು(Leopard) ಹೊಂಚು ಹಾಕಿದೆ. ರಣ ಬೇಟೆಗಾರನ ಹೆಜ್ಜೆ ಅರಿತ ಶ್ವಾನ ಕೂಗಿ ಮನೆಯವರನ್ನ ಅಲರ್ಟ್(Alert) ಮಾಡಿದ ಘಟನೆ ನಡೆದಿದೆ.
ಶಿರಸಿ(Sirsi) ತಾಲೂಕಿನ ಕಾಗೇರಿ ಗ್ರಾಮದಲ್ಲಿರುವ(Kageri Village) ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ(MP Vishweshwar hegade Kageri) ಮನೆಯನ್ನ ಹುಡುಕಿ ಅಂಗಳದಲ್ಲಿ ಚಿರತೆ ಓಡಾಡಿದೆ.
ಚಿರತೆ ಮನೆಯ ಜಮೀನಿಗೆ ನುಗ್ಗಿರೋದನ್ನ ಅರಿತ ಶ್ವಾನ (Dog) ರಣ ಬೇಟೆಗಾರ ಚಿರತೆಗೆ ಆವಾಜ್(Leopard Awaz) ಹಾಕಿದಲ್ಲದೆ ವಾಪಾಸ್ ಹೋಗುವಂತೆ ಮಾಡಿದೆ. ಚಿರತೆ ಬಂದಿರುವ ದೃಶ್ಯ ಕಾಗೇರಿ ಅವರ ಮನೆಯಲ್ಲಿ ಅಳವಡಿಸಿದ ಪ್ರತ್ಯೇಕ ಮೂರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಚಿರತೆಯ ಓಡಾಟ ಸಂಸದರು ಸೇರಿದಂತೆ ಕಾಗೇರಿ ಗ್ರಾಮದ ಜನರನ್ನು ಬೆಚ್ಚಿ ಆತಂಕವನ್ನು ಉಂಟು ಮಾಡಿದೆ. ಶಿರಸಿ ತಾಲೂಕಿನ(Sirsi Taluku) ವಿವಿಧಡೆ ಚಿರತೆ ಕಂಡು ಬರುತ್ತಿದ್ದು, ಜನರಿಗೆ ಜನ ಜಾನುವಾರುಗಳಿಗೆ ತೊಂದರೆ ಆಗುವ ಮುಂಚೆ ಅರಣ್ಯ ಇಲಾಖೆಯವರು ಮುಂಜಾಗ್ರತೆ ಕ್ರಮವಹಿಸಬೇಕಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ : ತಿರುಪತಿಯ ಲಡ್ಡು ಪ್ರಸಾದ ಕೌಂಟರ್ನಲ್ಲಿ ಅಗ್ನಿ ಅವಘಡ.
ಬ್ರಿಟಿಷ್ ನೌಕಾ ಪಡೆಯಿಂದ ಮೀನುಗಾರರ ಬಂಧನ.
ಹಸುವಿನ ಮೇಲೆ ವಿಕೃತಿ ಮೆರೆದ ಮತಾಂಧನ ಬಂಧನ.
ಬೈಕ್ ಅಪಘಾತಪಡಿಸಿದ್ದಲ್ಲದೆ, ಮಾರಕ ಹಲ್ಲೆ. ಕಾರವಾರದಲ್ಲಿ ಹೆಚ್ಚಾಯ್ತು ನೌಕಾ ಸೈನಿಕರ ದೌರ್ಜನ್ಯ.