ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಹಾವೇರಿ (Haveri) : ನೆಚ್ಚಿನ ಡಾಬಾ(Daba) ಬಂದಾಗ ಎದ್ದು ಕುಳಿತ ವ್ಯಕ್ತಿ ಕೊನೆಗೂ ವಿಧಿಯ ಕರೆಗೆ ದೂರವಾದ ದುರಂತದ (Tragedy) ಘಟನೆ ನಡೆದಿದೆ.
ಹಾವೇರಿ(Haveri) ಜಿಲ್ಲೆಯ ಶಿಗ್ಗಾವಿ(Shiggavi) ತಾಲೂಕಿನ ಬಂಕಾಪುರ (Bankapura) ಅಶೋಕ ಗುಡಿಮನಿ ನಿಧನರಾಗಿದ್ದಾರೆ. ಹಲವು ತಿಂಗಳಿಂದ ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಅವರು ಹೋರಾಟ ನಡೆಸುತ್ತಿದ್ದರು. ಮೊನ್ನೆ ಧಾರವಾಡದ(Dharwad) ಖಾಸಗಿ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆಂದು ಆಂಬುಲೆನ್ಸ್ ಮೂಲಕ ಮನೆಗೆ ಕರೆದೊಯ್ಯುವಾಗ ವಾಹನದಲ್ಲಿ ನೀನು ಊಟ ಮಾಡೋ ಡಾಬಾ ಬಂತು ಎದ್ದೇಳೋ ಅಂದಾಗ ಅಶೋಕ್ ಗುಡಿಮನಿಗೆ ಜೀವ ಬಂದಿತ್ತು. ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗಾ ಆಶೋಕ ಕೊನೆಗು ಮೃತ್ಯುವನ್ನ ಜಯಿಸದೆ ಇಹ್ಯಲೋಕ ತ್ಯಜಿಸಿದ್ದಾರೆ. ಮೃತ ದೇಹ ಬಂಕಾಪುರಕ್ಕೆ ತರಲಾಗಿದ್ದು ಕುಟುಂಬದ ಸಂಪ್ರದಾಯದಂತೆ ವಿಧಿವಿಧಾನ ನೇರವೆರಿಸಿ ಅಂತ್ಯಕ್ರಿಯೆ ನೇರವೇರಿಸಲಾಗಿದೆ.
ಇದನ್ನು ಓದಿ : ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊ. ಕ್ಷುಲ್ಲಕ ಕಾರಣಕ್ಕಾಗಿ ಕೃತ್ಯ.
ಉಳವಿ ಯಾತ್ರಾರ್ಥಿ ತಂಡದ ಗಲಾಟೆ. ಒಂದು ತಂಡದಿಂದ ಇನ್ನೊಂದು ತಂಡದ ಮೇಲೆ ಹಲ್ಲೆ. ಪರಾರಿ.