ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ದಾಂಡೇಲಿ(Dandeli) : ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ(Ulavi Jaatre) ಹೋಗಿ ವಾಪಾಸ್ ಬರುತ್ತಿದ್ದ ಯಾತ್ರಾರ್ಥಿಗಳ ತಂಡದ ಇನ್ನೊಂದು ಯಾತ್ರಾರ್ಥಿಗಳ ತಂಡ ಹಲ್ಲೆ (Assalt) ನಡೆಸಿ ಪರಾರಿಯಾದ (Escape) ಘಟನೆ ದಾಂಡೇಲಿ ನಗರದ(Dandeli Town) ಕುಳಗಿ ರಸ್ತೆಯಲ್ಲಿ(Kulagi Road) ನಡೆದಿದೆ.
ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾದ್ರೊಳ್ಳಿಯ ಅದೃಶ್ಯಪ್ಪ ಹೊಳೆ ಮತ್ತು ನಾಗರಾಜ ಕಳಸನ್ನವರ ಗಾಯಗೊಂಡವರು.
ಬೆಳಗಾವಿ(Belagavi) ಜಿಲ್ಲೆಯ ಬೈಲಹೊಂಗಲದ(Bailahongal) ಯಾತ್ರಾರ್ಥಿಗಳ ಏಳೆಂಟು ಜನರ ತಂಡ ಶನಿವಾರ ಸಂಜೆ ನಗರದ ಕುಳಗಿ ರಸ್ತೆಯಲ್ಲಿ(Kulagi Road) ರಸ್ತೆ ಬದಿಯಲ್ಲಿ ನಿಂತಿದ್ದ ಬೆಳಗಾವಿ ಜಿಲ್ಲೆಯ ಕಿತ್ತೂರು (Kitturu) ತಾಲೂಕಿನ ಕಾದ್ರೋಳ್ಳಿಯ(Kadrolli) ಯಾತ್ರಾರ್ಥಿಗಳ ತಂಡದ ಮೇಲೆ ಏಕಾಏಕಿ ಹಲ್ಲೆ ಮಾಡಿದೆ.ಬಳಿಕ ತಾವು ತಂದಿದ್ದ ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಎತ್ತಿನ ಗಾಡಿ ವಿಚಾರದಲ್ಲಿ ಬೈಲಹೊಂಗಲ ತಂಡ ಹಿಂದೆ ಇನ್ನೊಂದು ತಂಡದ ಜೊತೆ ಜಗಳ ನಡೆದಿತ್ತು ಎನ್ನಲಾಗಿದ್ದು, ತಪ್ಪು ತಿಳಿದು ಕಾದ್ರೊಳ್ಳಿ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ನಗರ ಠಾಣೆಯ ಪಿಎಸ್ಐ ಗಳಾದ ಅಮೀನ್ ಅತ್ತಾರ್, ಕಿರಣ್ ಪಾಟೀಲ್ ಮತ್ತು ಅಂಬಿಕಾನಗರ ಠಾಣೆಯ ಪಿಎಸ್ಐ ಮಹೇಶ ಮೇಲಗೇರಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಹಲ್ಲೆ ಮಾಡಿದ ತಂಡದವರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾದವರ ಪತ್ತೆಗೆ ಶೋಧ ನಡೆಸಿದ್ದಾರೆ. ದಾಂಡೇಲಿ ನಗರ ಠಾಣಾ (Dandeli Town Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಮರಕ್ಕೆ ಢಿಕ್ಕಿ ಹೊಡೆದ ಪ್ರವಾಸಿಗರ ಇನ್ನೋವಾ ಕಾರು.
ಹುಡುಗಿಗೋಸ್ಕರ ವಿದ್ಯಾರ್ಥಿಗಳ ನಡುವೆ ಜಗಳ
ಜಲಪಾತ ನೋಡಲು ಹೋದ ಯುವಕರು ಬದುಕಿ ಬರಲಿಲ್ಲ.