ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮಹಾರಾಷ್ಟ್ರ (Maharastra): ಜಲಗಾಂವ್ ಬಳಿ ಸಂಭವಿಸಿದ ರೈಲು ದುರಂತದಲ್ಲಿ 11 ಜನ ಸಾವನ್ನಪ್ಪಿದ್ದಾರೆ.
ಕರ್ನಾಟಕ ಎಕ್ಸ್ಪ್ರೆಸ್ ರೈಲು(Karnataka Express Train) ಹರಿದು ದುರ್ಘಟನೆ ಸಂಭವಿಸಿದೆ. ಘಟನೆಯ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೊದಲು ಪುಷ್ಪಕ್ ಎಕ್ಸ್ಪ್ರೆಸ್ (Pushpak Express) ರೈಲಿನಲ್ಲಿ ಬಿಸಿ ಗಾಳಿ ಕಾಣಿಸಿದೆ. ಈ ಬಿಸಿಗಾಳಿಯನ್ನೇ ಪ್ರಯಾಣಿಕರು ಬೆಂಕಿ ಎಂದು ಭಾವಿಸಿ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದು ಮತ್ತೊಂದು ಹಳಿಗೆ ಬಂದಿದ್ದರು. ಇದೇ ವೇಳೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಬಂದು ಹಳಿಯಲ್ಲಿದ್ದ ಪ್ರಯಾಣಿಕರ ಮೇಲೆ ಹರಿದು ಹೋಗಿದೆ.
ದೆಹಲಿಯಿಂದ ಬೆಂಗಳೂರು(Delhi to Bangalore) ಕಡೆ ಕರ್ನಾಟಕ ಎಕ್ಸ್ಪ್ರೆಸ್ ಬರುತ್ತಿತ್ತು. ಪುಷ್ಪಕ್ ಎಕ್ಸ್ಪ್ರೆಸ್ ಉತ್ತರ ಪ್ರದೇಶ ರಾಜಧಾನಿ ಲಕ್ಕೋದಿಂದ ಮುಂಬೈಗೆ(Laknow to Mumbai) ತೆರಳುತಿತ್ತು.
ಇದನ್ನು ಓದಿ : ಟೆಂಪೋ ಅಪಘಾತ. ಓರ್ವ ಸಾವು. ನಾಲ್ವರಿಗೆ ಗಾಯ.
ಯಲ್ಲಾಪುರ ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ರಾಜ್ಯ ಹಾಗೂಕೇಂದ್ರದಿಂದ ಪರಿಹಾರ ಘೋಷಣೆ
ಭಟ್ಕಳದಲ್ಲಿ ಗೋಮಾಂಸ ಅಡ್ಡೆಗೆ ನುಗ್ಗಿದ ಪೊಲೀಸರು. ಮೂವರು ಆರೆಸ್ಟ್.
ಯಲ್ಲಾಪುರದಲ್ಲಿ ಭೀಕರ ಅಪಘಾತ. ಹತ್ತು ಜನರ ದುರ್ಮರಣ.
ರೇನಾಲ್ಟ್ ಶೋ ರೂಮ್ ಗೆ ಬೆಂಕಿ. ಕೋಟ್ಯಂತರ ರೂ ಮೌಲ್ಯದ ಕಾರುಗಳು ಅಗ್ನಿಗಾಹುತಿ