ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಭಟ್ಕಳ(Bhatkal) : ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಟೆಂಪೋವೊಂದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ್ದಾನೆ. ಗಾಯಗೊಂಡು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿದ್ದು, ಕುಂದಾಪುರ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಬಳೆಯ ಗಾಂಧಿ ನಗರದ(Heble GandhiNagar) ನಿವಾಸಿ ಯೋಗೀಶ್ ನಾಗಪ್ಪ ನಾಯ್ಕ (29) ಮೃತ ದುರ್ದೈವಿ. ಕಾಯ್ಕಿಣಿ ತೆರ್ನಮಕ್ಕಿ(Ternamakki) ನಿವಾಸಿ ಗಣೇಶ ಎಂಬವರು ಇತ್ತೀಚೆಗೆ ಖಾಸಗಿ ಶಾಲೆಯಿಂದ ಸೆಕೆಂಡ್ ಹ್ಯಾಂಡ್ ಟೆಂಪೋವೊಂದನ್ನ ಖರೀದಿಸಿದ್ದರು. ಅದನ್ನು ಬದಲಾಯಿಸಲು ಬೈಂದೂರಿಗೆ ಟೆಂಪೋ ಕೊಂಡೊಯ್ಯುತ್ತಿದ್ದರು. ಭಟ್ಕಳ ರಾ ಹೆದ್ದಾರಿ 66 ಕ್ವಾಲಿಟಿ ಹೊಟೇಲ್ ಸಮೀಪ ತೆರಳುತ್ತಿದ್ದಾಗ ಟೆಂಪೋದ ಸ್ಟೇರಿಂಗ್ ಲಾಕ್ ಫೇಲ್ ಆದ ಕಾರಣ ವಾಹನ ಬಲಕ್ಕೆ ಪಲ್ಟಿಯಾಗಿ ಎದುರುಗಡೆಯಿಂದ ಬರುತ್ತಿದ್ದ ಮೋಟಾರ್ ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಯೋಗೇಶ್, ನಂತರ ವಿದ್ಯುತ್ ಬಿಲ್ ಪಾವತಿಸಲು ತೆರಳುತ್ತಿದ್ದ ಬೆಳಕೆಯ(Belke) ಮಹೇಶ ಮೊಗೇರ ಮತ್ತು ಶೇಖರ ಮೊಗೇರ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಶಿರೂರು ಮೂಲದ ಮುಜ್ದಲಿಫಾ ಸ್ಕೂಟರ್ ಗೆ, ಹನೀಫಾಬಾದ್ ನಿವಾಸಿ ನಯೀಮ್ ಕಮ್ರಿ ಅವರಿಗೂ ಡಿಕ್ಕಿ ಹೊಡೆದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಯಲ್ಲಾಪುರ ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ರಾಜ್ಯ ಹಾಗೂಕೇಂದ್ರದಿಂದ ಪರಿಹಾರ ಘೋಷಣೆ
ಭಟ್ಕಳದಲ್ಲಿ ಗೋಮಾಂಸ ಅಡ್ಡೆಗೆ ನುಗ್ಗಿದ ಪೊಲೀಸರು. ಮೂವರು ಆರೆಸ್ಟ್.
ಯಲ್ಲಾಪುರದಲ್ಲಿ ಭೀಕರ ಅಪಘಾತ. ಹತ್ತು ಜನರ ದುರ್ಮರಣ.
ರೇನಾಲ್ಟ್ ಶೋ ರೂಮ್ ಗೆ ಬೆಂಕಿ. ಕೋಟ್ಯಂತರ ರೂ ಮೌಲ್ಯದ ಕಾರುಗಳು ಅಗ್ನಿಗಾಹುತಿ
ಹಸುವಿನ ಹತ್ಯೆ ಪ್ರಕರಣ. ಐವರು ವಶಕ್ಕೆ. ಕೃತ್ಯದಲ್ಲಿ ತೊಡಗಿದವರ ಗಡಿಪಾರಿಗೆ ಕ್ರಮ