ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ  ಸೋಡಿಗದ್ದೆ(Sodigadde) ಶ್ರೀ ಮಹಾಸತಿ ದೇವರ (Mahasati Devi) ಜಾತ್ರೆಯು ಗುರುವಾರದಂದು ಹಾಲಹಬ್ಬದೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿದೆ.

ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ  ನಡೆಯುವ  ಜಾತ್ರೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ  ದೇವಸ್ಥಾನದ ಆಡಳಿತಾಧಿಕಾರಿ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಚಾಲನೆ ನೀಡಿದರು. ಮೊದಲ ದಿನವೇ ಭಕ್ತರು ಶ್ರೀ ದೇವರಿಗೆ ಹೂವಿನ ಪೂಜೆಯನ್ನು(Flowers Pooja) ಸಲ್ಲಿಸಿ ದೇವರ ದರ್ಶನ ಪಡೆದರು. ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು ತಮ್ಮತಮ್ಮ ಹರಕೆ ತರಿಸಿದರು.

ಜಿಲ್ಲೆಯ ಗಡಿಭಾಗದಲ್ಲಿರುವ ಶ್ರೀ ಮಹಾಸತಿ ಅಮ್ಮನವರ ಜಾತ್ರೆಗೆ ದಕ್ಷಿಣ ಕನ್ನಡ(Dakshinakannada), ಉತ್ತರಕನ್ನಡ(Uttarakannada) ಸೇರಿ ಪರ ಊರಿನಿಂದ ಸಹಸ್ರಾರು ಭಕ್ತಾಧಿಗಳು ಆಗಮಿಸಿ ತಮ್ಮ ಹರಕೆಗಳನ್ನು ತೀರಿಸುವ ಸಂಪ್ರದಾಯ ರೂಢಿಯಲ್ಲಿದೆ. ಜಾತ್ರೆಯ ಪ್ರಯುಕ್ತ  ದೇವಸ್ಥಾನವನ್ನು ವಿಶೇಷ ಹೂವಿನಿಂದ ಸುಂದರವಾಗಿ ಕಂಗೊಳಿಸುವಂತೆ ಅಲಂಕೃತಗೊಳಿಸಲಾಗಿದೆ.

ಸೋಡಿಗದ್ದೆ ಶ್ರೀ ಮಹಾಸತಿ ಜಾತ್ರೆಯಲ್ಲಿ(Sodigadde shri Mahasati Jaatra) ಭಕ್ತರು ಗೊಂಬೆಗಳನ್ನು ಅರ್ಪಿಸುತ್ತಾರೆ. ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ. ಗೊಂಬೆಗಳಲ್ಲಿ ಮಹಾಸತಿ, ಜಟ್ಟಿಗರಾಯ, ಮರದ ಹುಲಿರಾಯ, ನಾಗರಕಲ್ಲು, ಹಾಯ್ ಗೂಳಿ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಗುತ್ತದೆ. ಜಾತ್ರಾ ಸಮಯದಲ್ಲಿ ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಎಂಟು ದಿನಗಳ ಕಾಲ ಪ್ರಸಾದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಗುರುವಾರದಿಂದಲೇ ಪ್ರಸಾದ ಭೋಜನ ಆರಂಭಗೊಂಡು ಸಾವಿರಾರು ಭಕ್ತರ ಪ್ರಸಾದ ರೂಪದಲ್ಲಿ ಭೋಜನ ಸವಿದರು.

ಇಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಶುಕ್ರವಾರ ಬೆಳಿಗ್ಗೆ ಹರಕೆ ಹೊತ್ತವರು ಕೆಂಡ ಹಾಯಲಿದ್ದಾರೆ. ಒಂಬತ್ತು ದಿನಗಳ ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.

ಇದನ್ನು ಓದಿ : ತಿರುಪತಿಯಲ್ಲಿ ಕರ್ನಾಟಕ ಯಾತ್ರಿಕರಿಗೆ  ಇನ್ಮುಂದೆ ವಸತಿ ವ್ಯವಸ್ಥೆ ಸಿದ್ದ.

ಯಲ್ಲಾಪುರದಲ್ಲಿ ಭೀಕರ ಅಪಘಾತ. ಹತ್ತು ಜನರ ದುರ್ಮರಣ.

ಸವಣೂರು ಅಗಲಿದ ವ್ಯಾಪಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾರವಾರ ಬೀದಿ ಬದಿ ವ್ಯಾಪಾರಸ್ಥರು.

ಕರ್ನಾಟಕ ಎಕ್ಸ್ಪ್ರೆಸ್ ಟ್ರೈನ್ ಅಪಘಾತ. 11 ಪ್ರಯಾಣಿಕರ ದುರ್ಮರಣ.

ಟೆಂಪೋ ಅಪಘಾತ. ಓರ್ವ ಸಾವು. ನಾಲ್ವರಿಗೆ ಗಾಯ.

ಯಲ್ಲಾಪುರ ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ರಾಜ್ಯ ಹಾಗೂಕೇಂದ್ರದಿಂದ ಪರಿಹಾರ ಘೋಷಣೆ