ಭಟ್ಕಳ (Bhatkal): ಪಟ್ಟಣದ ಶಂಸುದ್ದಿನ್ ಸರ್ಕಲ್(Samshuddin Circle) ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವೃದ್ಧೆಯೋರ್ವಳು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಲಕ್ಷ್ಮೀ ಜಟ್ಟ ನಾಯ್ಕ (70) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತರು ಶಿರಾಲಿ ಚಿತ್ರಾಪುರ(Shirali Chitrapur)  ನಿವಾಸಿ ಎಂದು ತಿಳಿದು ಬಂದಿದೆ.

ಭಟ್ಕಳದಿಂದ ಬೆಂಗಳೂರಿಗೆ(Bhatkal to Chitrapur) ತೆರಳುವ ಖಾಸಗಿ ಬಸ್ ಹೊನ್ನಾವರ ಕಡೆಯಿಂದ ಬಂದು ಭಟ್ಕಳ ಶಂಸುದ್ದಿನ್ ಸರ್ಕಲ್ ನಲ್ಲಿ ಯೂಟರ್ನ್ ತೆಗದುಕೊಳ್ಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ವೃದ್ಧೆಯನ್ನ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಭಟ್ಕಳ ನಗರ ಠಾಣೆಯ(Bhatkal Town Station) ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : ಒಕ್ಕರಿಸಿತಾ ಚೀನಾ ವೈರಸ್. ರಾಜಧಾನಿ ಬೆಂಗಳೂರಲ್ಲಿ HMPV ಸೋಂಕು ಪತ್ತೆ.

ಮುರ್ಡೇಶ್ವರ ಹಾಗೂ ಇಡಗುಂಜಿಗೆ ನಟಿ ಪೂಜಾ ಗಾಂಧಿ ಭೇಟಿ.

ಹೊನ್ನಾವರದಲ್ಲಿ ಲಾರಿ ಪಲ್ಟಿ. ಇಬ್ಬರ ದುರ್ಮರಣ.

ಅವಿವಾಹಿತ ಜೋಡಿಗಳಿಗೆ ಹೋಟೆಲ್ ನಲ್ಲಿ ನೋ ಎಂಟ್ರಿ.