ಗೋವಾ(GOA) : ಖೈದಿಯೊಬ್ಬ ಸ್ಯಾನಿಟೈಸರ್(SANITISER) ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ (SUCIDE ATTEMPT)ಘಟನೆ ಗೋವಾದ ಕೋಲ್ವಾ ಕಾರಾಗೃಹದಲ್ಲಿ (KOLVA JAIL) ನಡೆದಿದೆ.

ಘಟನೆಯಲ್ಲಿ ಖೈದಿಯ ಗಂಭೀರ ಸ್ಥಿತಿಗೆ ತಲುಪಿದ್ದು  ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲೀಮ್ಗೆ(BAMBOLIUM) ದಾಖಲಿಸಲಾಗಿದೆ. ನಿನ್ನೆ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕಾರಾಗೃಹದ(JAIL) ಅಧಿಕಾರಿಗಳಿಂದ ಆಗುತ್ತಿದ್ದ ಹಿಂಸೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದನೆಂದು ಹೇಳಲಾಗುತ್ತಿದೆ.

ವಿಚಾರಣಧೀನ ಖೈದಿ(PRISONER) ರಾಜು ದಾಸ್ ಎಂಬಾತಾನೆ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ. ಈತನಿಗೆ ಇಲ್ಲಿನ ದವಾಖಾನೆಯಲ್ಲಿ ಕೆಲಸ ನೀಡಲಾಗಿತ್ತು. ಇದರಿಂದಾಗಿ ಈತ ಬೇಸರಗೊಂಡಿದ ಎನ್ನಲಾಗಿದೆ.  ಈ ಕೆಲಸ ನನಗೆ ಬೇಡ ಎಂದು ಜೈಲು ಅಧಿಕಾರಿಗಳಿಗೆ  ಹೇಳಿದ್ದ. ಗುರುವಾರ ಬೆಳಿಗ್ಗೆ ದವಾಖಾನೆಯಲ್ಲಿ ಖೈದಿಗಳ ತಪಾಸಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಈ ಖೈದಿಯು ಸ್ಯಾನಿಟೈಜ‌ರ್ ತೆಗೆದುಕೊಂಡು ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಸ್ಯಾನಿಟೈಜರ್ ಕುಡಿದು ಮೈಮೇಲೆ ಕೂಡ ಹಾಕಿಕೊಂಡು ಬೆಂಕಿ ಹಚ್ಚಿಕೊಂಡ ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕೋಲ್ವಾ ಪೋಲಿಸರು(KOLVA POLICE) ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಆಯುಧ ಪೂಜೆ ಸಂಭ್ರಮ

ಗ್ರಾಮೀಣ ಪ್ರದೇಶದಲ್ಲಿ ಕುಣಿಕೆ ಹಾಕಿ ಜಾನುವಾರು ಕದಿಯುವ ಖದೀಮರು

ಬಾಗಾ ಬೀಚಲ್ಲಿ ಪ್ರವಾಸಿ ಬೋಟ್ ಪಲ್ಟಿ

ಆನ್ ಲೈನ್ ವಂಚನೆ. ಪೊಲೀಸರ ಕಾರ್ಯದಿಂದ ಹಣ ವಾಪಾಸ್

ನಾರ್ತ್ ಕರ್ನಾಟಕ ಅಚೀವರ್ಸ್ ಪ್ರಶಸ್ತಿ ಪಡೆದ ಚೈತ್ರಾ ಕೋಟಾರಕರ್.

ರತನ್ ಟಾಟಾ ನಿಧನಕ್ಕೆ ಪ್ರೇಯಸಿ ಬಾವುಕ ವಿದಾಯ