ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) :   ಅಕ್ರಮವಾಗಿ ಸಾಗುವಾನಿ ಮರದ ತುಂಡು ದಾಸ್ತಾನು ಮಾಡುತ್ತಿದ್ದ ನಾಲ್ವರು ಅರಣ್ಯಗಳ್ಳರನ್ನು  ಬಂಧಿಸುವಲ್ಲಿ ಹಳಿಯಾಳ ಅರಣ್ಯ ವಿಭಾಗದ(Haliyal Forest Division)  ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಅಜಗಾಂವ ಗ್ರಾಮದ (Ajagaum) ಗದಿಗೆಪ್ಪ ಕಾಗಿ , ಮೌಲಾನಾ ಮುಜಾವರ,  ಗುರುರಾಜ ಕಾಗಿ, ಹಾಗೂ ಕೆಸರೊಳ್ಳಿಯ ಸಲಿಮ್ ಸನದಿ ಬಂಧಿತರಾಗಿದ್ದರೆ. ಪ್ರಕರಣದಲ್ಲಿ ಅಂದಾಜು ಮೂರು ಲಕ್ಷ 50 ಸಾವಿರ  ಮೌಲ್ಯದ ನಾಟಾವನ್ನು ವಶಪಡಿಸಿಕೊಂಡಿದ್ದಾರೆ.

ಬೆಲೆ ಬಾಳುವ ಮರಗಳನ್ನು ಕಡಿದು ಅಜಗಾಂವ ಗ್ರಾಮದಲ್ಲಿ ದಾಸ್ತಾನು ಮಾಡಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ (Forest raid) ನಡೆಸಿದ್ದರು.

ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡ ಮೂವರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ.

ಅರಣ್ಯಾಧಿಕಾರಿ ಬಸವರಾಜ ಎಮ್ ಅವರು ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಹಳಿಯಾಳ ಡಿಸಿಎಫ್ (Haliyal Dcf) ಪ್ರಶಾಂತ ಕೆ.ಸಿ. ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ  ಗಣೇಶ ಮಾಷ್ಠಿ, ಗಸ್ತು ಅರಣ್ಯಪಾಲಕರಾದ  ಮಹೇಶ ಕಲಕಟ್ಟಿ, ಶಂಕರಾನಂದ ಜಿಡ್ಡಿಮನಿ,  ಸಿದ್ದಪ್ಪ ಮಳಕನ್ನವರ, ಹಳಿಯಾಳ ವಲಯದ(Haliyal Range) ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ವಾಹನ ಚಾಲಕರು ಕಾರ್ಯಾಚರಣೆೆಯಲ್ಲಿದ್ದರು.

ಇದನ್ನು ಓದಿ,:   ಮಹಾಸತಿಗೆ ಕೆಂಡದ ಭಕುತಿ ಪ್ರದರ್ಶಿಸಿದ ಭಕ್ತರು.

ವಿದ್ಯಾರ್ಥಿ ಬ್ಯಾಗ್ ನಲ್ಲಿ ದೇಶಿ ನಿರ್ಮಿತ ಬಾಂಬ್.

ಪ್ರಸಿದ್ಧ ಮಾಜಿ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು.

ಹೊನ್ನಾವರ ಗೋ ಕಳ್ಳತನ ಮಾಡುತ್ತಿದ್ದ ಮೂವರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.